clear
clear
 ಪುಣ್ಯಕ್ಷೇತ್ರ
   ಗಿರಿಧಾಮ
   ಪ್ರೇಕ್ಷಣೀಯ ಸ್ಥಳ
   ಜಲಪಾತ
   ಬೀಚುಗಳು
   ನೆರವು
   ವಿಶ್ವಪರ್ಯಟನ
ಮುಖಪುಟ » ನೋಡು ಬಾ ನಮ್ಮೂರ » India » ಪೂರ್ಣಪಾಠ
ಹರಿದ್ವಾರದಲ್ಲಿ ಕಾರ್ತೀಕ ಹುಣ್ಣಿಮೆ ಪವಿತ್ರ ಸ್ನಾನ

Haridwar
ಬೆಂಗಳೂರು, ನ. 2 : ಇವತ್ತು ನವಂಬರ್ 2 ಸೋಮವಾರ ಪವಿತ್ರ ಕಾರ್ತೀಕ ಹುಣ್ಣಿಮೆ. ಗಂಗೆಯಲ್ಲಿ ಮಿಂದು ಪಾಪಗಳನ್ನು ತೊಳೆದುಕೊಂಡು ಪುನೀತಭಾವ ತಾಳುವ ಸುದಿನ. ಕಾರ್ತೀಕ ಮಾಸದ ಕೊನೆಯ ದಿನವಾದ ಇವತ್ತು ಹಿಂದೂ ಭಕ್ತ ಸಮುದಾಯಕ್ಕೆ ಅತ್ಯಂತ ಶುಭದಿನ.

ಹರಿದ್ವಾರದ ಗಂಗಾನದಿಯಲ್ಲಿ ಈ ಪುಣ್ಯದಿನದಂದು ಹಿಂದೂ ಜನಸ್ತೋಮವೇ ನೆರೆದಿದೆ. ಲಕ್ಷಾಂತರ ಭಕ್ತರು ನದಿಯಲ್ಲಿ ಜಳಕ ಮಾಡುತ್ತಿದ್ದಾರೆ. ಗಂಗೆಯಲ್ಲಿ ಮಿಂದೆದ್ದರೆ ಕೇವಲ ಪಾಪ ನಾಶವಾಗುವುದಷ್ಟೇ ಅಲ್ಲದೆ ಆತ್ಮ ಶುದ್ಧಿಯಾಗಿ ಸ್ವರ್ಗದ ಬಾಗಿಲುಗಳು ಭಕ್ತನಿಗೆ ತೆರೆಯುತ್ತವೆ ಎಂದು ನಂಬಿಕೆ. ತ್ರಿಪುರಾಸುರನನ್ನು ಸಂಹಾರ ಮಾಡುವ ಮೂಲಕ ಶಿವ ಜನತೆಯನ್ನು ಕಾಪಾಡಿದ ದಿವಸವಾಗಿಯೂ ಕಾರ್ತೀಕ ಹುಣ್ಣಿಮೆ ಪೌರಾಣಿಕ ಮಹತ್ವ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿರುವ ಕಲ್ಪವಾಸಿ ಡಾಟ್ ಕಾಂ ಮುಂಬರುವ ಕುಂಭಮೇಳ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ವಿಶಿಷ್ಟ ವೆಬ್ ತಾಣ ನಿರ್ಮಿಸಿದೆ. ಕುಂಭಮೇಳವನ್ನು ಗಮನದಲ್ಲಿಟ್ಟುಕೊಂಡು ಇವತ್ತಿನ ಕಾರ್ತೀಕ ಸ್ನಾನದ ದಿನ ಹರಿದ್ವಾರದಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ಕಲ್ಪವಾಸಿ ಅಧ್ಯಯನ ಮಾಡುತ್ತಿದೆ. ಹರಿದ್ವಾರದಲ್ಲಿರುವ ನಾನಾ ಘಾಟ್ ಗಳು, ಸಂಚಾರ ವ್ಯವಸ್ಥೆ, ಪ್ರವಾಸಿ ಸೌಕರ್ಯಗಳ ಅಧ್ಯಯನಕ್ಕೆ ಪೂರಕವಾಗಿ ಕಾರ್ತೀಕ ಸ್ನಾನದ ಅಧ್ಯಯನವನ್ನು ಕಲ್ಪವಾಸಿ ಮಾಡುತ್ತಿದ್ದು ಅದಕ್ಕಾಗಿ ಬೆಂಗಳೂರಿನಿಂದ ತಜ್ಞರ ಒಂದು ತಂಡವನ್ನು ಹರಿದ್ವಾರಕ್ಕೆ ಕಳಿಸಿದೆ.

ಕುಂಭಮೇಳದ ಬಗೆಗೆ ಆಸಕ್ತಿ ಮತ್ತು ಹೆಚ್ಚಿನ ವಿವರ ಬಯಸುವವರು ಈ ಕೆಳಕಂಡ ವ್ಯಕ್ತಿ ಮತ್ತು ಸಂಸ್ಥೆಯನ್ನು ಸಂಪರ್ಕಿಸಬಹುದು:
Sudhir S,PRO, Studiorama India Limited, 118/1, 1ST A T Street, 6th Block,Jayanagar, Yediyur, Bangalore 560 070. INDIA

Telefax: +91 80 2676 0216. Mobile: +91-96332 54579. Email: info@studiorama.co.in. www.kalpavasi.com

ನವೆಂಬರ್ 2, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಪೀಟರ್
ದಿನಾಂಕ: 03 Nov 2009 10:42 am
ಇಲ್ಲೂ ಕೂಡ ಜಲ ಮಾಲಿನ್ಯ. ಛೆ..ಛೆ..ಜನರಿಗೆ ಯಾವಾಗ ಬುದ್ಧಿ ಬರುತ್ತೋ ?

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು