ಕಲಬುರ್ಗಿ, ಫೆ. 3 : ನಮ್ಮ ವಿರುದ್ಧ ಮಾತನಾಡುವವರ 'ನಾಲಗೆ ಕತ್ತರಿಸಿ' ಎಂದು ಹೇಳಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮಾತಿನ ವರಸೆಯನ್ನು ವಿರೋಧಿಸಿ ಒಂದು ಪೊಲೀಸ್ ಕಂಪ್ಲೇಂಟ್ ದಾಖಲಾಗಿದೆ.ಕಲಬುರ್ಗಿಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಮ ಪ್ರಭು ಪಾಟೀಲ್ ಬ್ರಹ್ಮಾಪುರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಓರ್ವ ಮುಖ್ಯಮಂತ್ರಿಯಾಗಿ ಇಂಥ
ಬೆಂಗಳೂರು, ಜ.26: ಮೈಸೂರು ಮತ್ತು ಭಟ್ಕಳದ ಚರ್ಚ್ ಗಳ ಮೇಲೆ ದಾಳಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅರವತ್ತೊಂದನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಹೇಳಿದರು. ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕೋಮು ಸೌಹಾರ್ದತೆ ಮತ್ತು ಸಾಮರಸ್ಯವನ್ನು ಹಾಳು ಮಾಡುತ್ತಿರುವ ದುಷ್ಟಶಕ್ತಿಗಳ ದುಷ್ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ.
ಬೆಂಗಳೂರು,ಜ.11 :ಐದು ವರ್ಷ ವಯೋಮಿತಿ ಒಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಕರ್ನಾಟಕವನ್ನು ಪೋಲಿಯೊ ಮುಕ್ತ ರಾಜ್ಯವನ್ನಾಗಿಸುವಲ್ಲಿ ಪೋಷಕರು ಸಹಕರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರೆ ನೀಡಿದ್ದಾರೆ.ರೇಸ್‌ಕೋರ್ಸ್ ರಸ್ತೆಯಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಪೋಲಿಯೋ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ
ಬೆಂಗಳೂರು, ಜ. 6 : ರೆಡ್ಡಿ-ಯಡ್ಡಿ ಜಗಳದಲ್ಲಿ ಮಂತ್ರಿ ಪದವಿ ಕಳೆದುಕೊಂಡಿರುವ ಮಾಜಿ ಸಚಿವ ಶೋಭಾ ಕರಂದ್ಲಾಜೆ ಅವರ ಮುಂದಿನ ನಡೆ ಏನು? ರಾಜಕೀಯ ಚಕ್ರವ್ಯೂಹದಲ್ಲಿ ಸಿಲುಕಿ ಅಧಿಕಾರದಿಂದ ವಂಚಿತರಾದ ಅವರಿಗೆ ಮತ್ತೆ ಒಳ್ಳೆ ಕುರ್ಚಿ ಸಿಗುತ್ತದಾ? ಸಿಕ್ಕರೆ ಎಲ್ಲಿ, ಹೇಗೆ, ಎಂಬ ಪ್ರಶ್ನೆ ಶೋಭಾ ಬೆಂಬಲಿಗರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಅವರ ಪುನರ್ವಸತಿಯ ಬಗ್ಗೆ ವರಿಷ್ಠರೂ ತಲೆಕೆಡಿಸಿಕೊಂಡಂತಿದೆ.
ಬೆಂಗಳೂರು, ಜ. 4 : ರಾಜ್ಯದ ಗಡಿಜಿಲ್ಲೆ ಬೆಳಗಾವಿಯಲ್ಲಿ ಸಚಿವ ಸಂಪುಟ ನಡೆಸಿದ್ದ ಬಿಜೆಪಿ ಸರಕಾರ ಇದೀಗ ಐತಿಹಾಸಿಕ ಕೇಂದ್ರ ಹಂಪಿಯಲ್ಲಿ ಸಂಪುಟ ಸಭೆ ನಡೆಸಲು ಚಿಂತನೆ ನಡೆಸಿದೆ ಎಂದು ಪ್ರವಾಸೋಧ್ಯಮ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ತಿಳಿಸಿದ್ದಾರೆ.ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ
ಬೆಂಗಳೂರು, ಜ. 4 : ಪಕ್ಷದಲ್ಲಿ ಶಿಸ್ತಿನ ಕೊರತೆಯಿಂದ ಜರ್ಜರಿತವಾಗಿರುವ ಬಿಜೆಪಿ ಅತೃಪ್ತ ಶಾಸಕರನ್ನು ಸಮಾಧಾನಪಡಿಸುವುದರ ಜೊತೆಗೆ ಮುಂಬರುವ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ನಗರದ ಹೊರವಲಯದ ಗೋಲ್ಡನ್ ಪಾಮ್ಸ್ ರೆಸಾರ್ಟ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಆಯೋಜಿಸಲಾಗಿದೆ.ಪಕ್ಷ ನಿಷ್ಠ ಶಾಸಕರ ಅತೃಪ್ತಿಯಿಂದ ಕಂಗೆಟ್ಟಿರುವ ಬಿಜೆಪಿ ವರಿಷ್ಠರು, ಸಮಸ್ಯೆ ಪರಿಹಾರಕ್ಕಾಗಿ ರೆಸಾರ್ಟ್ ಕಡೆ ಮುಖ ಮಾಡಿದ್ದು,
ಬೆಂಗಳೂರು, ಡಿ. 24 : ಬೆಂಗಳೂರು ನಗರದ ಬಿಜೆಪಿ ಶಾಸಕರು, ಪಕ್ಷದ ಅಧ್ಯಕ್ಷ ಡಿ ವಿ ಸದಾನಂದಗೌಡ, ಸಂಸದ ಅನಂತ್ ಕುಮಾರ್ ಮತ್ತಿತರ ಬಿಜೆಪಿ ಧುರೀಣರ ಅನುಮಾನಾಸ್ಪದ ಗೈರು ಹಾಜರಿಯಲ್ಲಿ ರೆಬೆಲ್ ಸ್ಟಾರ್ ರೇಣುಕಾಚಾರ್ಯ ಇಂದು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಛಲ ಸಾಧಿಸಿದ ರೇಣುಕಾಗೆ ಅಂತೂ ಅಧಿಕಾರ ಲಕ್ಷ್ಮಿ ಒಲಿದುಬಂದಳು. ಇದರೊಂದಿಗೆ ಆಡಳಿತ ಪಕ್ಷ
ಬೆಂಗಳೂರು, ಡಿ. 16 : ರೆಡ್ಡಿ ಬಂಡಾಯದ ಚಂಡಮಾರುತದಿಂದ ಪಾರಾದರೂ ಯಡ್ಡಿಗೆ ಸುಖವಾದ ನಿದ್ದೆಯೋನೂ ಬರುತ್ತಿಲ್ಲ. ಸಂಪುಟದಿಂದ ಶೋಭಾ ನಿರ್ಗಮಿಸಿದ ನಂತರ ಕಳಕೊಂಡ ನಿದ್ದೆಯನ್ನು ಯಡ್ಡಿ ಇದುವರೆಗೂ ವಾಪಸ್ಸು ಪಡೆದಿಲ್ಲ. ಜಗದೀಶ್ ಶೆಟ್ಟರ್ ಅವರನ್ನು ಮಂತ್ರಿ ಮಾಡಿದ ಮಾತ್ರಕ್ಕೆ ಇಲ್ಲಿ ಎಲ್ಲವೂ ನೆಟ್ಟಗಾಗುವುದಿಲ್ಲ ಎಂಬ ಚಿಂತೆ ಭಾರತಿಯ ಜನತಾಪಕ್ಷದ ರಾಜ್ಯ ಘಟಕವನ್ನು ಕಾಡದೆ ಬಿಟ್ಟಿಲ್ಲ.ಭಿನ್ನಮತೀಯ ಶಾಸಕರ ಒಂದು
ಶಿವಮೊಗ್ಗ, ಡಿ. 5 : ಅಭಿವೃದ್ಧಿಯ ನೆಪದಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಗೆದು-ಬಗೆದು ಮೂರಾಬಟ್ಟೆ ಮಾಡಿ ಪಾದಚಾರಿಗಳು, ವಾಹನ ಸವಾರರು ನಗರದ ಯಾವ ರಸ್ತೆಯಲ್ಲೂ ಸಂಚರಿಸಲು ಆಗದೆ ಪರದಾಡಬೇಕಾದ ಸ್ಥಿತಿ ನಿರ್ಮಾಣ ಮಾಡಿ ವರ್ಷಗಳೇ ಕಳೆದರೂ, ಕಾಮಗಾರಿ ಮಾತ್ರ ಕುಂಟುತ್ತಲೇ ಸಾಗುತ್ತಿದ್ದು, ಜನರು ನಿತ್ಯವೂ ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ.ನಗರದ ಯಾವ ರಸ್ತೆಯಲ್ಲಿಯೂ ನೆಟ್ಟಗೆ ಹೋಗಲು ಸಾಧ್ಯವಿಲ್ಲ. ಹೀಗಿದೆ
ನವದೆಹಲಿ, ಡಿ. 4 : ಓಬಳಾಪುರಂ ಮೈನಿಂಗ್ ಕಂಪನಿಯ(ಒಎಂಸಿ) ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಪ್ರಕರಣವನ್ನು ಇಂದು ಸಿಬಿಐ ತನಿಖೆಗೆ ಅಧಿಕೃತವಾಗಿ ಹಸ್ತಾಂತರಿಸಿತು. ಕೇಂದ್ರ ಸರಕಾರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಸಿಬಿಐ ತನಿಖೆಗೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ-ಆಂಧ್ರಪ್ರದೇಶದಲ್ಲಿ ಆರು ಗಣಿ ಕಂಪನಿಗಳು ಅದಿರು ತೆಗೆಯುವುದನ್ನು ತಕ್ಷಣವೇ ನಿಲ್ಲಸುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ ಮಾಡಿದ