ಮಲ್ಲು ಬೆಡಗಿ ನವ್ಯಾ ನಾಯರ್ ಕಡೆಗೂ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಶೀಘ್ರದಲ್ಲೇ ತಾವು ಹಸೆಮಣೆ ಏರುವುದಾಗಿ ತಿಳಿಸಿರುವ ನವ್ಯಾ ನಾಯರ್ ಸಪ್ತಪದಿ ತುಳಿಯುವುದು ಗ್ಯಾರಂಟಿಯಾಗಿದೆ. ಈ ಹಿಂದೆ ತಾವು ಮದುವೆಯಾಗುತ್ತಿಲ್ಲ, ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಹೇಳಿ ನುಣುಚಿಕೊಂಡಿದ್ದರು. ಆದರೆ ಇದೀಗ ನವ್ಯಾ ನಾಯರ್ ಅವರ ತಂದೆ ತಾಯಿ ವರನ
ಇದು ಭಾಗ್ಯದ ಬಳೆಗಾರ ಚಿತ್ರದ ವ್ಯಥೆಯ ಕಥೆ. ಶಿವರಾಜ್ಕುಮಾರ್ ಮೇಲಿನ ಪ್ರೀತಿಯಿಂದ ಚಿತ್ರಕ್ಕೆ ಸಂಭಾಷಣೆ ಬರೆಯಲು ಮಳವಳ್ಳಿ ಒಪ್ಪಿಕೊಂಡರು. ಸೆಟ್ಗೇ ಹೋಗಿ ಸಂಭಾಷಣೆ ತಿದ್ದುವ ಕೆಲಸವೂ ಸೇರಿದಂತೆ ಎರಡು ಲಕ್ಷ ರೂಪಾಯಿಗೆ ಮಾತುಕತೆಯಾಗಿತ್ತು. ಚಿತ್ರದಲ್ಲಿ ಸಾಯಿ ಒಂದು ಪಾತ್ರವನ್ನೂ ನಿರ್ವಹಿಸಿದ್ದರು. ಅದಕ್ಕೆ ಸಂಭಾವನೆಯೇನೂ ಇಲ್ಲ. ಆದರೆ, ಚಿತ್ರ ಮುಗಿದ ನಂತರವೂ ಅವರ ಸಂಭಾಷಣೆಗೆ ಬಾಕಿ ಸಂದಾಯವಾಗಲೇ ಇಲ್ಲ.
ಮಲ್ಲು ಬೆಡಗಿ ನವ್ಯಾ ನಾಯರ್ ಹಸೆಮಣೆ ಏರುವ ಸನ್ನಾಹದಲ್ಲಿದ್ದಾರೆ. ಕೇರಳದ ಚಂಗನಾಚೆರಿ ಮೂಲದ ನಾಯರ್ ಜನಾಂಗದ ಯುವಕ ನವ್ಯಾ ನಾಯರ್ ಬಾಳಸಂಗಾತಿಯಾಗಲಿದ್ದಾನೆ. ಈತ ಮುಂಬೈನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು ಶೀಘ್ರದಲ್ಲೇ ನವ್ಯಾ ಕೈ ಹಿಡಿಯಲಿದ್ದಾನೆ ಎನ್ನಲಾಗಿದೆ.ಈ ಹಿಂದೆಯೂ ನವ್ಯಾ ನಾಯರ್ ಮದುವೆ ಬಗ್ಗೆ ಪುಂಖಾನುಪುಂಖ ಸುದ್ದಿಗಳು ಪ್ರಕಟವಾಗಿದ್ದವು. ಈ ಸುದ್ದಿಗಳನ್ನೆಲ್ಲಾ ನವ್ಯಾ ನಾಯರ್ ಸಾರಾಸಗಟಾಗಿ ತಳ್ಳಿ
ಮಳೆ ರಚ್ಚೆಯಲ್ಲಿ ಚಿತ್ರೋದ್ಯಮ ಫ್ರೀಜ್ ಆಗಿದೆ. ಕಾನಿಷ್ಕಾ ಅಂಗಳದಲ್ಲಿ ಹಳೆ-ಹೊಸ ನಿರ್ಮಾಪಕರು ಕಪ್ಪುಗಟ್ಟಲೆ ಕಾಫಿ, ಚಹಾ ಹೀರುತ್ತಾ ಉದ್ಯಮದ ಅಧೋಗತಿಗೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಕೂತಿದ್ದಾರೆ. ದಶಕದ ಹಿಂದೆ ಹತ್ತು ಹದಿನೈದು ಲಕ್ಷದಲ್ಲಿ ಸಿನಿಮಾ ಮಾಡಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದ ನಿರ್ಮಾಪಕರು ಈಗ ಕೋಟಿಗಟ್ಟಲೆ ಹೂಡುವ ಪರಿಸ್ಥಿತಿ. ಹಾಕಿದ ಹಣ ವಾಪಸ್ ಬಂದೀತೆಂಬ ಖಾತರಿ ಇಲ್ಲ. ಸದ್ಯದ
ಪಾತ್ರ ನಿರ್ವಹಣೆಯಲ್ಲಿ ಶಿವರಾಜಕುಮಾರ್ ತಂದೆಯನ್ನೇ ಹೋಲುತ್ತಾರೆ. ವಾತ್ಸಲ್ಯಮಯಿ ಚಿತ್ರಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಶಿವಣ್ಣ ‘ಜೋಗಿ‘ಯಾಗೂ ಗೆದ್ದವರು. ಪ್ರಸ್ತುತ ಅವರ ಅಭಿನಯದ ‘ಭಾಗ್ಯದ ಬಳೆಗಾರ‘ ಚಿತ್ರಕ್ಕೆ ರಾಮನಗರದ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಖಳನಟ ಆದಿಲೋಕೇಶ್ ತನ್ನ ಸಹಚರ ಮಳವಳ್ಳಿ ಸಾಯಿಕೃಷ್ಣರೊಟ್ಟಿಗೆ ಸಾಗಿ ಬರುತ್ತಿದ್ದಾಗ ಹಳ್ಳಿಯ ಚೆಲುವೆಯೊಬ್ಬಳು ಎದುರಾಗುತ್ತಾಳೆ. ಅವಳ ಮೇಲೆ ಮೋಹಿತನಾದ ಆದಿಲೋಕೇಶ್ ಆಕೆ ನನ್ನವಳಾಗಬೇಕು ಎಂಬ