ಗೋಲ್ಡನ್ ಸ್ಟಾರ್ ಗಣೇಶ್ ಅವರ ಸ್ವಂತ ಬ್ಯಾನರ್ ನಲ್ಲಿ ಮೂಡಿ ಬಂದ ಹಿಟ್ ಚಿತ್ರ 'ಮಳೆಯಲಿ ಜೊತೆಯಲಿ' ಅಮೆರಿಕಾದಲ್ಲಿ ಬಿಡುಗಡೆ ಭಾಗ್ಯ ಕಾಣಲಿದೆ. ಕಸ್ತೂರಿ ಮಿಡಿಯಾ ಕನ್ನಡ ಪಿಕ್ಚರ್ ಕ್ಲಬ್ ಸಹಯೋಗದೊಂದಿಗೆ ಉತ್ತರ ಕ್ಯಾಲಿಫೋರ್ನಿಯಾ ದ ಬೇ ಪ್ರಾಂತ್ಯದಲ್ಲಿ ಫೆಬ್ರವರಿ 5ರಿಂದ 7ರ ವರೆಗೆ ಚಿತ್ರ ಪ್ರದರ್ಶನ ಗೊಳ್ಳಲಿದೆ.ವಿದೇಶಗಳಲ್ಲಿ ಗಣೇಶ್ ಚಿತ್ರಗಳನ್ನು ನೋಡುವ ದೊಡ್ಡ ಅಭಿಮಾನಿಗಳ ಬಳಗವೇ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರ ಪ್ರಪಂಚ ಪರ್ಯಟನೆಗೆ ಹೊರಡಲು ಅಣಿಯಾಗಿದೆ. ಜನವರಿ 16ರಂದು 'ಮಳೆಯಲಿ ಜೊತೆಯಲಿ' ಚಿತ್ರ ವಿದೇಶಗಳಲ್ಲಿ ತೆರೆಕಾಣಲಿದೆ. ಮೊದಲು ಯುಎಸ್ ಎಯಲ್ಲಿ ತೆರೆಕಾಣಲಿರುವ ಈ ಚಿತ್ರ ನಂತರ ಉಳಿದ ದೇಶಗಳ ಕಡೆಗೆ ಪ್ರಯಾಣ ಬೆಳೆಸಲಿದೆ.ಆಸ್ಟ್ರೇಲಿಯಾ, ಸಿಂಗಪುರ, ನ್ಯೂಜಿಲ್ಯಾಂಡ್, ಜರ್ಮನಿ, ಯುಕೆ, ಹಾಂಗ್ ಕಾಂಗ್, ದುಬೈ, ಹಾಲೆಂಡ್ ದೇಶಗಳಲ್ಲಿ ಬಿಡುಗಡೆಯಾಗಲಿದೆ ಎನ್ನುತ್ತಾರೆ
'ಮಳೆಯಲಿ ಜೊತೆಯಲಿ' ಚಿತ್ರದ ಪ್ರಚಾರಕ್ಕಾಗಿ ಎರಡು ದೈತ್ಯ ಕಂಪನಿಗಳು ಗಣೇಶನ ನೆರವಿಗೆ ಬಂದಿವೆ! ಕೋಕಾ ಕೋಲಾ ಮತ್ತು ರಿಲಯನ್ಸ್ ಕಂಪನಿಗಳು ಒಟ್ಟಿಗೆ ಕೈಜೋಡಿಸಿ 'ಮಳೆಯಲಿ ಜೊತೆಯಲಿ' ಚಿತ್ರದ ಪ್ರಚಾರದಲ್ಲಿ ತೊಡಗಿವೆ. ಈ ಮೂಲಕ ಮಳೆಯಲಿ ಜೊತೆಯಲಿ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ. ಡಿಸೆಂಬರ್ 11ರಂದು ಗಣೇಶ್, ಅಂಜನಾ ಸುಖಾನಿ
ಸುದೀರ್ಘ ಸಮಯದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು 'ಮುಂಗಾರು ಮಳೆ' ಸುರಿಯಲಿದೆಯೇ? ಸತತ ಸೋಲುಗಳಿಂದ ಕಂಗೆಟ್ಟಿರುವ ಚಿತ್ರರಂಗದಲ್ಲಿ ಹೊಸ ಸಂಚಲನ ಉಂಟಾಗಲಿದೆಯೇ? ಹೌದು ಎನ್ನುತ್ತಾರೆ 'ಮಳೆಯಲಿ ಜೊತೆಯಲಿ' ಬರುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ .ಈಗಾಗಲೇ ಚಿತ್ರದ ಧ್ವನಿಸುರುಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 'ಮಳೆಯಲಿ ಜೊತೆಯಲಿ' ಮೇಲೆ ನಿರೀಕ್ಷೆಗಳೂ ಮುಗಿಲು ಮುಟ್ಟಿವೆ. 'ಮಳೆಯಲಿ ಜೊತೆಯಲಿ' ಚಿತ್ರದಲ್ಲೂ ಗಣೇಶ್ ಮತ್ತೆ
ಗೋಲ್ಡನ್ ಸ್ಟಾರ್ ಗಣೇಶ್ ಸ್ವಂತ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ 'ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ಹರಿಕೃಷ್ಣ ಮತ್ತೆ ಸುಮಧುರವಾದ ಸಂಗೀತ ನೀಡಿ ತಮ್ಮ ಛಾಪು ತೋರಿಸಿದ್ದಾರೆ. ಜಯಂತ್ ಕಾಯ್ಕಿಣಿ ಮತ್ತು ಕವಿರಾಜ್ ಉತ್ತಮವಾದ ಸಾಹಿತ್ಯ ನೀಡುವ ಮೂಲಕ ಹಾಡಿನ ತೂಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಚಿತ್ರದ ಹೆಚ್ಚಿನ ಹಾಡುಗಳನ್ನು ಹಾಡಿಸಲು ಸಂಗೀತ ನಿರ್ದೇಶಕರು ಮತ್ತೆ ಬಾಲಿವುಡ್
ಪ್ರವಾಸಿಗರ ಸ್ವರ್ಗ ಗೋವಾ. ಅಲ್ಲಿನ ಸಮುದ್ರ ತೀರ ಹಾಗೂ ರಮಣೀಯ ಸ್ಥಳಗಳ ಸೌಂದರ್ಯ ಬಣ್ಣಿಸಲು ಅಸಾಧ್ಯ. ಪ್ರಕೃತಿ ಮಾತೆಯ ವಿಶೇಷ ಸನ್ನಿಧಾನದಿಂದ ಕೂಡಿರುವ ಗೋವಾದಲ್ಲಿ ‘ಮಳೆಯಲಿ ಜೊತೆಯಲಿ ಚಿತ್ರದ ಹಾಡೊಂದು ಚಿತ್ರೀಕರಣಗೊಂಡಿದೆ. ಸಾಹಿತಿ ಜಯಂತ ಕಾಯ್ಕಿಣಿ ರಚಿಸಿರುವ ‘ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು ಸಾಕಾಯಿತು ಇನ್ನು ಈ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿಬರುತ್ತಿರುವ ಚಿತ್ರ 'ಮಳೆಯಲಿ ಜೊತೆಯಲಿ'. ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿರುವ ಚಿತ್ರಕ್ಕೆ ಹಾಡುಗಳ ಚಿತ್ರೀಕರಣ ಭರದಿಂದ ಸಾಗಿದೆ. ಸಾಹಿತಿ ಜಯಂತ್ ಕಾಯ್ಕಿಣಿ ಅವರ ರಚನೆಯ ‘ನೀ ಸನಿಹಕ್ಕೆ ಬಂದರೆ ಹೃದಯದ ಗತಿ ಏನು...’ ಎಂಬ ಗೀತೆ ಪ್ರಕೃತಿ ಮಾತೆಯ ತವರುಮನೆಯಂತಿರುವ ಕೇರಳದ ರಮ್ಯ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಖ್ಯಾತ ಗಾಯಕ ಸೋನುನಿಗಂ ಅವರ
ಬೆಂಗಳೂರು ಈಗ ಚಿರಾಪುಂಜಿಯಂತಾಗಿದೆ. ಮುಸಲಧಾರೆ ಸುರಿಯುತ್ತ್ತಲೇ ಇದೆ. ಮಳೆಯಲ್ಲೇ ಮಿಂದು ಹೋಗಿದೆ ಉದ್ಯಾನ ನಗರಿ. ಇದೇ ಸಂದರ್ಭದಲ್ಲಿ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾಗಣೇಶ್ ಅವರು ನಿರ್ಮಿಸುತ್ತಿರುವ 'ಮಳೆಯಲಿ ಜೊತೆಯಲಿ' ಚಿತ್ರದ ಹಾಡುಗಳ ಚಿತ್ರೀಕರಣ ಬೆಂಗಳೂರಿನಲ್ಲಿ ಆರಂಭವಾಗಿದೆ. ನಾಯಕ ಗಣೇಶ್ ಹಾಗೂ ಅಂಜನಾ ಸುಖಾನಿ ಅವರ ಅಭಿನಯದಲ್ಲಿ ಚಿತ್ರದ ಗೀತೆಯೊಂದರ ಚಿತ್ರೀಕರಣ ನಗರದ ಗ್ಲೋಬಲ್ ವಿಲೇಜ್‌ನಲ್ಲಿ ಚಿತ್ರೀಕರಣಗೊಳ್ಳುವ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಹೊರಹೊಮ್ಮುತ್ತಿರುವ ‘ಮಳೆಯಲಿ ಜೊತೆಯಲಿ’ ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ನಡೆಯುತ್ತಿದೆ ಎಂದು ನಿರ್ಮಾಪಕಿ ಶಿಲ್ಪಾಗಣೇಶ್ ತಿಳಿಸಿದ್ದಾರೆ. ‘ಮುಂಗಾರು ಮಳೆ’ಯ ಯಶಸ್ಸಿಗೆ ಕಾರಣರಾದವರಲ್ಲಿ ಕಥೆಗಾರ ಪ್ರೀತಂಗುಬ್ಬಿ ಕೂಡ ಒಬ್ಬರು. ನಂತರ ‘ಹಾಗೆ ಸುಮ್ಮನೆ’ಚಿತ್ರವನ್ನು ನಿರ್ದೇಶಿಸುವ ಮೂಲಕ ಪ್ರೀತಂ ನಿರ್ದೇಶಕನ ಸ್ಥಾನಕ್ಕೆ ಬಡ್ತಿ ಪಡೆದರು. ಪ್ರಸ್ತುತ ಚಿತ್ರದ ನಿರ್ದೇಶನದ ಹೊಣೆ ಹೊತ್ತಿರುವ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ‘ಮಳೆಯಲಿ ಜೊತೆಯಲಿ‘ ಚಿತ್ರಕ್ಕೆ ಸಕಲೇಶಪುರ ಹಾಗೂ ಮೈಸೂರು ನಗರಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ ಎಂದು ನಿರ್ಮಾಪಕಿ ಶಿಲ್ಪಾಗಣೇಶ್ ತಿಳಿಸಿದ್ದಾರೆ. ಈ ತಿಂಗಳ 16ರಂದು ಬೆಂಗಳೂರು ನಗರದಲ್ಲಿ ಹಾಡಿನ ಚಿತ್ರೀಕರಣಕ್ಕೆ ಚಾಲನೆ ದೊರಕಲಿದೆ. ನಟನೆಗೆ ಮೀಸಲಾಗಿದ್ದ ನಾಯಕ ಗಣೇಶ್ ಈ ಚಿತ್ರದ ಗೀತೆಯೊಂದಕ್ಕೆ ಧ್ವನಿ ನೀಡುವುದರೊಂದಿಗೆ ಗಾಯಕನಾಗೂ