ಕನ್ನಡ ಸುದ್ದಿಗಳನ್ನು ಓದಿರಿ.
ಸೇನಾ ಪುಂಡರ ದಾಳಿಗೆ ಐಬಿಎನ್ ಕಚೇರಿ ಧ್ವಂಸಮುಂಬೈ/ಪುಣೆ, ನ. 20 : ಮಹಾರಾಷ್ಟ್ರದಲ್ಲಿ ಶಿವಸೇನೆ ರೌಡಿಗಳ ಪುಂಡಾಟಿಕೆ ಮುಂದುವರೆದಿದ್ದು, ಮುಂಬೈ ಮತ್ತು ಪುಣೆಯಲ್ಲಿರುವ ಐಬಿಎನ್ ಲೋಕಮಾತ (ಮರಾಠಿ) ಐಬಿಎನ್ 7 (ಹಿಂದಿ) ಕಚೇರಿ ಮೇಲೆ ದಾಳಿ ನಡೆಸಿರುವ ಶಿವಸೇನೆ ಕಾರ್ಯಕರ್ತರು ಕಚೇರಿ ಧ್ವಂಸಗೊಳಿಸಿದ್ದಾರೆ. ದಾಳಿಯಲ್ಲಿ ಕೆಲ ಪತ್ರಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಹತಾಶೆಗೊಂಡಿರುವ ಶಿವಸೇನೆ ಮುಖಂಡ ಬಾಳಾ ಠಾಕ್ರೆ ಹಾಗೂ ಅವರ
ಹಿರಿಯ ಕಾಂಗ್ರೆಸ್ಸಿಗ ಬಿ ಶಂಕರಾನಂದ ನಿಧನಬೆಳಗಾವಿ, ನ. 20 : ಕಳೆದ ಹಲವಾರು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಬಿ ಶಂಕರಾನಂದ ಶುಕ್ರವಾರ ಬೆಳಕಿನ ಜಾವ 2 ಗಂಟೆಗೆ ನಗರದ ಕೆಎಲ್ ಇ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಂಕರಾನಂದ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶೋಕ ವ್ಯಕ್ತಪಡಿಸಿದ್ದು, ಕುಟುಂಬ ಸದಸ್ಯರಿಗೆ ದುಃಖ..
ಮನೆ ಬಿಟ್ಟುಹೋದವಳ ಗರ್ವಭಂಗನವದೆಹಲಿ, ನ. 19 : ಗಂಡ ಮಕ್ಕಳನ್ನು ಬಿಟ್ಟು ಮನೆ ತೊರೆದು ಹೊರಗೆ ನಡೆಯುವವಳಿಗೆ ಆತನ ಪತಿ ಉಪ್ಪು ಸೊಪ್ಪು ಹಾಕಬಾರದು. ಅವಳಾಗೇ ಬಿಟ್ಟುಹೋದ ಮೇಲೆ ಅವಳಿಗೆ ಈತ ಯಾಕೆ ಪರಿಹಾರ ಕೊಡಬೇಕು ? ಅವಳ ಜೀವನ ನಿರ್ವಹಣೆಗೋಸ್ಕರ ಈತ ಯಾಕೆ ಕಾಸು ಬಿಚ್ಚಬೇಕು?ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಬೀರುವಂತಹ ಒಂದು ಐತಿಹಾಸಿಕ ತೀರ್ಪನ್ನು..
ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ, ಹೆಗ್ಡೆಬೆಂಗಳೂರು, ನ. 18 : ನೆರೆ ಸಂತ್ರಸ್ತರಿಗಾಗಿ ನಡೆಸುತ್ತಿರುವ ಪರಿಹಾರ ಕಾರ್ಯಕ್ರಮಗಳು ಲೋಪದೋಷದಿಂದ ಕೂಡಿದ್ದು, ನೊಂದವರಿಗೆ ನೆರವಾಗುವ ಕೆಲಸ ಸಂಪರ್ಕಕವಾಗಿ ನಡೆಯುತ್ತಿಲ್ಲ ಎಂಬ ಲೋಕಾಯುಕ್ತರ ವರದಿ ಸರಕಾರದ ಕೈಸೇರಿದೆ. ಸರಕಾರದ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ಪರಿಹಾರ ಕಾರ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಲೋಕಾಯುಕ್ತ ಸಂತೋಷ ಹೆಗ್ಡೆ ಸಂತ್ರಸ್ತರಿಗೆ ಸಕಾಲದಲ್ಲಿ ನೆರವಾಗಿ..
ವಂದೇ ಮಾತರಂ ವಿವಾದವೊಂದು ಸಂಚುಬೆಂಗಳೂರು, ನ. 18 : ವಂದೇ ಮಾತರಂ ಅನ್ನು ನೆಪವಾಗಿಟ್ಟುಕೊಂಡು ಹಿಂದೂ ಮುಸ್ಲಿಂ ಸಮಾಜ ಬಾಂಧವರ ನಡುವೆ ಘರ್ಷಣೆ ಹುಟ್ಟುಹಾಕಲು ಯತ್ನಿಸಲಾಗುತ್ತಿದೆ ಎಂದು ಅಂಜುಮನ್ ಫನ್ ಕಾರಾನೆ ಉರ್ದು ಸಂಸ್ಥೆಯ ಕಾರ್ಯದರ್ಶಿ ಶರ್ಯಾರ್ ಖಾನ್ ಹೇಳಿದರು. ಹಿಂದೂ ಬಾಂಧವರು ಫತ್ವಾದ ಅರ್ಥವನ್ನು ಹಾಗೂ ಮುಸ್ಲಿಮರು ಬಾಂಧವರು ವಂದೇ ಮಾತರಂ ಗೀತೆಯ ಅರ್ಥವನ್ನು ಮನಗಂಡರೆ ಈ ಕುರಿತು ವಿವಾದವೇ..
ಅಣುಸ್ಥಾವರದ ಮೇಲೆ ದಾಳಿ ಭೀತಿ, ಕಟ್ಟೆಚ್ಚರನವದೆಹಲಿ, ನ.17: ಮುನ್ನೆಚ್ಚರಿಕೆ ಕ್ರಮವಾಗಿ ಅಣು ಸ್ಥಾವರ ಹೊಂದಿರುವ ಎಲ್ಲ ರಾಜ್ಯಗಳಿಗೂ ಅಣು ಘಟಕಗಳ ಸುತ್ತ ಸರ್ಪಗಾವಲು ಹಾಕುವಂತೆ ಗೃಹ ಸಚಿವಾಲಯ ಸೂಚಿಸಿದೆ. ಅಣುಸ್ಥಾವರಗಳಂತಹ ಆಯಕಟ್ಟಿನ ನಿರ್ಮಾಣಗಳಿಗೆ ಯಾವುದೇ ಹಾನಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ವಹಿಸಲಾಗಿದೆ ಎಂದು ಗೃಹಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.ಮುಂಬೈ ಮೇಲಿನ ದಾಳಿಯ ಸಂಚನ್ನು ರೂಪಿಸಿದ್ದ ಎನ್ನಲಾಗಿರುವ ಡೇವಿಡ್ ಹೆಡ್ಲಿ ದೇಶದ ಮಹತ್ವದ ಅಣುಸ್ಥಾವರಗಳು..
ವಂದೇಮಾತರಂ ಉರ್ದು ಅನುವಾದಕ್ಕೆ ಮನವಿಲಕ್ನೋ,ನ.17: ವಂದೇಮಾತರಂ ಹಾಡಿನ ನಿಜವಾದ ಅರ್ಥವನ್ನು ಮುಸ್ಲಿಂ ಸಮುದಾಯ ತಿಳಿದುಕೊಳ್ಳಲು ಉರ್ದು ಬಾಷೆಗೆ ಅನುವಾದಿಸಬೇಕೆಂದು ಕೋರಿ ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ವಂದೇಮಾತರಂನ ತರ್ಜುಮೆಯನ್ನು ಶೀಘ್ರ ಒದಗಿಸಬೇಕೆಂದು ಒತ್ತಾಯಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಂಡಳಿ ಅಧ್ಯಕ್ಷ ಮೌಲಾನ ಮಿರ್ಜಾ ಮೊಹಮ್ಮದ್ ಅತ್ತರ್ ಪತ್ರ ಬರೆದಿದ್ದಾರೆ.ವಂದೇಮಾತರಂನ ಸರಿಯಾದ..
ಆಂಧ್ರ: ಜಿಲೇಟಿನ್ ಕಡ್ಡಿ ಸ್ಫೋಟಕ್ಕೆ 15 ಬಲಿಗುಂಟೂರು, ನ.16: ಇಲ್ಲಿನ ದಾಚೇಪಲ್ಲಿ ಮಂಡಲಕ್ಕೆ ಸೇರಿದ ನಾರಾಯಣಪುರದ ಮನೆಯೊಂದರಲ್ಲಿ ನಡೆದ ಸ್ಫೋಟಕ್ಕೆ 15 ಜನ ಬಲಿಯಾಗಿದ್ದಾರೆ. ಸ್ಫೋಟದ ಭೀಕರತೆಗೆ ಸುತ್ತಮುತ್ತಲಿನ 10 ಮನೆಗಳು ನಾಶವಾಗಿದೆ.ಘಟನೆ ನಡೆದ ಮನೆಯಲ್ಲಿ ಅಕ್ರಮವಾಗಿ ಜಿಲೇಟಿನ್ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತ್ತು. ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯ ನಂತರ ಸ್ಥಳೀಯ ಪೊಲೀಸರು ತಿಳಿಸಿದರು. ಈ ಘಟನೆಯಿಂದ ಗಾಯಗೊಂಡ..
'ವಂದೇ ಮಾತರಂ'ಫತ್ವಾಗೆ ಸಚಿವ ಸಲ್ಮಾನ್ ವಿರೋಧನವದೆಹಲಿ, ನ.16: ರಾಷ್ಟ್ರದ ಹೆಮ್ಮೆ, ದೇಶಭಕ್ತಿ ಮತ್ತು ಬದ್ಧತೆಯೊಂದಿಗೆ ತಾವು 'ವಂದೇ ಮಾತರಂ' ಹಾಡುವುದಾಗಿ ಹೇಳಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, ಮುಸ್ಲಿಮರು ವಂದೇ ಮಾತರಂ ಗೀತೆ ಹಾಡದಂತೆ ಜಮಾತ್ ಉಲೇಮಾ ಹಿಂದ್ (ಜೆಯುಎಚ್) ಹೊರಡಿಸಿರುವ ಫತ್ವಾಗೆ ವಿರೋಧ ವ್ಯಕ್ತಪಡಿಸಿದ್ದಾರೆ.ಇದು ಒಪ್ಪುವಂತಹದ್ದಲ್ಲ ಎಂದಿರುವ ಅವರು, ಜೆಯುಎಚ್ ಸಂಘಟನೆ ಎರಡು ಬಣಗಳಾಗಿ ಒಡೆದು ಹೋಗಿರುವುದರಿಂದ ಈ..
ಖಾಕಿ ಚಡ್ಡಿ, ಬಿಳಿ ಅಂಗಿಗೆ ಆರ್ ಎಸ್ ಎಸ್ ವಿದಾಯ?ಪುಣೆ, ನ.15: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ತನ್ನ ಸಮವಸ್ತ್ರ 'ಗಣ ವೇಷ' (ಖಾಕಿ ಚಡ್ಡಿ, ಬಿಳಿ ಅಂಗಿ, ಚರ್ಮದ ಬೆಲ್ಟ್) ಸಾಕು ಎನ್ನಿಸಿದೆಯೇ? ಈಗಿನ ಸಮವಸ್ತ್ರವನ್ನು ಬದಲಿಸಿ ಹೊಸದನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ತಿಳಿಸಿದ್ದಾರೆ.ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಂಘದ ಪ್ರತಿನಿಧಿ ಸಭೆಯಲ್ಲಿ ಬಹುಮತ ಅಭಿಪ್ರಾಯ..