clear
clear
clear
clear
ಮುಖಪುಟ » ಸುದ್ದಿಜಾಲ » ಯಡ್ಡಿ ಆಡಳಿತ » ಪೂರ್ಣಪಾಠ
ಬುಧವಾರದಿಂದ ಪವರ್ ಕಟ್: ಈಶ್ವರಪ್ಪ

ಬೆಂಗಳೂರು,ನ. 10: ರಾಜ್ಯದಲ್ಲಿ ಬೇಡಿಕೆಯಷ್ಟು ವಿದ್ಯುತ್ ಉತ್ಪಾದನೆಯಾಗದ ಕಾರಣ ಈ ವಾರದಿಂದಲೇ ಲೋಡ್ ಶೆಡ್ಡಿಂಗ್ ಜಾರಿ ಮಾಡಲು ಯಡಿಯೂರಪ್ಪ ನೇತೃತ್ವದ ಭಾಜಪ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಮಾತುಕತೆ ನಡೆಸಿದರು. ನಾಳೆ ನವೆಂಬರ್ 11ರ ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಆ ಬಗ್ಗೆ ಸ್ಪಷ್ಟ ನಿಲುವು ಪ್ರಕಟಗೊಳ್ಳಲಿದೆ.

ಜಲವಿದ್ಯುತ್ ಹಾಗೂ ಶಾಖೋತ್ಪನ್ನ ಘಟಕಗಳಲ್ಲಿ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಹೊರರಾಜ್ಯದಿಂದ ಹೆಚ್ಚುವರಿ ವಿದ್ಯುತ್ ಖರೀದಿ ಮಾಡಲು ಸಾಧ್ಯವಿಲ್ಲದ ಕಾರಣ ಲೋಡ್ ಶೆಡ್ಡಿಂಗ್ ಜಾರಿಗೆ ಸರ್ಕಾರ ಶರಣಾಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಸಂಪುಟದಲ್ಲಿ ತೀರ್ಮಾನ: ಇತ್ತೀಚಿನ ನೆರೆಯಿಂದ ರಾಯಚೂರು ಶಾಖೋತ್ಪನ್ನ ಘಟಕದಲ್ಲಿ ಹೆಚ್ಚು ಉತ್ಪಾದನೆ ಮಾಡಲಾಗಿಲ್ಲ.ಜತೆಗೆ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಗಮನಿಸಿ ಮುಂದಿನ ಬೇಸಿಗೆವರೆಗೆ ವಿದ್ಯುತ್ ಉತ್ಪಾದನೆ ಮಾಡಲು ಕ್ರಮ ಕೈಗೊಳ್ಳಬೇಕಿದೆ.ಹೀಗಾಗಿ ನಗರ ಪ್ರದೇಶ ಸೇರಿ ರಾಜ್ಯದೆಲ್ಲೆಡೆ ಲೋಡ್ ಶೆಡ್ಡಿಂಗ್ ಜಾರಿಗೆ ಮುಂದಾಗಿದ್ದೇವೆ. ಆದರೆ ಈ ವಿಷಯನ್ನು ಸಚಿವಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಒಟ್ಟು 130 ಮೆ.ವ್ಯಾ. ವಿದ್ಯುತ್ ಬೇಡಿಕೆಯಿದ್ದು , 118 ಮೆ.ವ್ಯಾ. ವಿದ್ಯುತ್‌ನ್ನು ಗ್ರಾಹಕರಿಗೆ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಎಲ್ಲೆಲ್ಲಿ ಎಷ್ಟು ಗಂಟೆ ವಿದ್ಯುತ್

* ಬೆಂಗಳೂರಿಗೆ 23 ಗಂಟೆ ವಿದ್ಯುತ್ ( ನಂಬಬಹುದಾ)
* ಇತರ ನಗರ ಪ್ರದೇಶಗಳಿಗೆ 21 ಗಂಟೆ ( ನಂಬಲ್ಲ)
* ಗ್ರಾಮೀಣಕ್ಕೆ 3 ಫೇಸ್‌ನಲ್ಲಿ 15 ಗಂಟೆ ( ಇದು ಹೊಸದೇನಲ್ಲ)
* ಗ್ರಾಮೀಣ ಪಂಪ್‌ಸೆಟ್‌ಗೆ 6 ಗಂಟೆ ( ಸಾಕಾ?)

(ದಟ್ಸ್ ಕನ್ನಡವಾರ್ತೆ)

ನವೆಂಬರ್ 10, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಗಣೇಶ್
ದಿನಾಂಕ: 11 Nov 2009 9:29 pm
ಸರ್ಕಾರದ ಕಯಿಇಂದ ವಿದ್ಯುತ್ ನೀಡಲು ಆಗದಿದ್ದರೆ ಬೇರೆ ಕಂಪನಿಗಳಿಗೆ ಗುತ್ತಿಗೆ ನೀಡಲಿ ಉದಾ :ರಿಲಯಂಸ್ ಎನರ್ಜಿ

ಇಂದ: Pandu Ranga Rao N
ದಿನಾಂಕ: 10 Nov 2009 8:00 pm
Eedu Yeddde power cut kanri.... Idake samshaya beda... Sarwanjna...

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು