clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಸಿಎಂ ಬದಲಾವಣೆ ಇಲ್ಲ : ಅಬ್ಬಾಸ್ ನಕ್ವಿ

Yeddyurappa
ನವದೆಹಲಿ, ನ. 3 : ಕರ್ನಾಟಕ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತ ಶೀಘ್ರದಲ್ಲಿ ಶಮನವಾಗಲಿದೆ. ನಾಯಕತ್ವ ಬದಲಾವಣೆ ಮಾಡುವುದು ಸಾಧ್ಯವೇ ಇಲ್ಲ ಎಂದು ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಕ್ವಿ ಸ್ಪಷ್ಟಪಡಿಸಿದ್ದಾರೆ. ಸೋಮವಾರ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಕೂಡಾ ಇದೇ ಮಾತನ್ನು ಹೇಳಿದ್ದರು. ಈ ಮೂಲಕ ಹೈಕಮಾಂಡ್ ಸಮ್ಮುಖದಲ್ಲಿ ಶಮನಗೊಳ್ಳಬೇಕಿದ್ದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಂತಾಯಿತು.

ಈ ಮಧ್ಯೆ ಪ್ರಸಕ್ತ ವಿದ್ಯಮಾನದ ಬಗ್ಗೆ ಹೈಕಮಾಂಡ್ ಗೆ ವಿವರಿಸಲು ಇಂಧನ ಸಚಿವ ಕೆ ಎಸ್ ಈಶ್ವರಪ್ಪ, ವಕ್ತಾರ ಸಿಟಿ ರವಿ, ಶಾಸಕರಾದ ಆನೇಕಲ್ ನಾರಾಯಣಸ್ವಾಮಿ, ರಾಮದಾಸ್ ಮತ್ತು ಎಸ್ ರಘು ಅವರನ್ನೊಳಗೊಂಡ ನಿಯೋಗ ದೆಹಲಿಗೆ ತೆರಳಿತು. ಭಿನ್ನಮತ ಶಮನಗೊಳಿಸುವ ಕುರಿತು ಹೈಕಮಾಂಡ್ ಜೊತೆ ಚರ್ಚೆ ನಡೆಸಲಾಗುವುದು. ಸರಕಾರಕ್ಕೆ ಧಕ್ಕೆಯಾಗದ ಹಾಗೆ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.

ಸುಷ್ಮಾ ಸ್ವರಾಜ್ ಅವರೊಂದಿಗೆ ಜನಾರ್ದನರೆಡ್ಡಿ ಇಂದು ನಡೆಸಿದ ಮಾತುಕತೆ ವಿಫಲವಾಗಿದ್ದು, ರೆಡ್ಡಿ ನಾಯಕತ್ವ ಬದಲಾಗಬೇಕು ಎಂಬ ಪಟ್ಟಿನಿಂದ ಹಿಂದೆ ಸರಿಯುತ್ತಿಲ್ಲ. ಸುಷ್ಮಾ ಸ್ವರಾಜ್ ನಮ್ಮ ತಾಯಿ ಇದ್ದ ಹಾಗೆ, ತಾಯಿ ಮಕ್ಕಳ ಬಯಕೆ ಈಡೇರಿಸುತ್ತಾರೆ ಎನ್ನುವ ನಂಬಿಕೆ ಇದೆ. ನಮ್ಮ ನಿಲುವು ಅಚಲ ಎಂದು ರೆಡ್ಡಿ ಹೇಳಿದರು.

(ಏಜನ್ಸೀಸ್)

ನವೆಂಬರ್ 3, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ನಾಗರಾಜ ರಾವ್ ಟೊರೋ೦ಟೊ
ದಿನಾಂಕ: 05 Nov 2009 9:25 am
ಯಡ್ಡಿ ರೆಡ್ಡಿ ಜಗಳದಿ೦ದ ಬಿಜೆಪಿ ಬುಡಕ್ಕೇ ಬ೦ದಿದೆ ಸ೦ಚಕಾರ.ಬಿಜೆಪಿ ಸರ್ಕಾರ ಉಳಿಯಬೇಕಾದರೆ ಒ೦ದೇ ಮಾರ್ಗ.ಯಡ್ಡಿ ಮತ್ತು ಶೆಟ್ಟರ್ ಮಧ್ಯೆ ಸ೦ಧಾನವಾಗಿ ೨ ೧/೨ ವರ್ಶ ಯಡ್ಡಿ ಮುಖ್ಯ ಮ೦ತ್ರಿ,ಮಿಕ್ಕ ೨ ೧/೨ ವರ್ಶ ಶೆಟ್ಟರ್ ಮುಖ್ಯ ಮ೦ತ್ರಿ ಯಾಗೋದು.ಮು೦ದಿನ ಚುನಾವಣೆಯಲ್ಲಿ ಇದೇರೀತಿ ಲಿ೦ಗಾಯಿತ ಮುಖ೦ಡ ೨ ೧/೨ ವರ್ಶ ,ವಕ್ಕಲಿಗ ೨ ೧/೨ ವರ್ಶ ಸಿಎಮ್ ಆಗೋದು ಎ೦ದು ಸ೦ಧಾನ ಮಾಡಿಕೊ೦ಡರೆ ಕರ್ನಾಟಕ ದಲ್ಲಿ ಬಿಜೆಪಿ ಸರ್ಕಾರ ಉಳಿಯುತ್ತದೆ.ಅನ೦ತ ಸಿಎಮ್ ಆಗೋದು ಈ ಜನ್ಮದಲ್ಲಿ ಸಾಧ್ಯವಿಲ್ಲ.ಏಕೆ೦ದರೆ ಅವನು ಚಾಮರಾಜಪೇಟೆ ಬ್ರಾ೦ಹಣ.ರಾಯರ ಗುಡಿಯಲ್ಲಿ ಊಟಕ್ಕೆ ಮಾತ್ರ ಲಾಯಕ್ಕು.ಈ ಹೊಲೆಸು ರಾಜಕೀಯವೇ ಹಾಗೆ.

ಇಂದ: channabasavanna
ದಿನಾಂಕ: 04 Nov 2009 1:04 pm
ಜನಾರ್ಧನ ರೆಡ್ಡಿ ಮೊದಲು ಜನಗಳಿಗೆ ತಿಳಿಧೆ ಇಲ್ಲ , ಇವರು ಹೆಸರು ಗೊತ್ತಾಗಿದ್ದು ಕುಮಾರಸ್ವಾಮಿ ಅವರ ಮೇಲೆ ೧೫೦ ಕೋಟಿ ಹಗರನವನ್ನು ಹೊರಿಸಿದಾಗ ಮಾತ್ರ ಇ ರೆಡ್ಡಿಗಳ ಹೆಸರು ಗೊತ್ತಾಗಿದ್ದು , ಯಡಿಯೋರಪ್ಪ್ನವರು ಬೆವರು ಸುರಿಸಿ ಕಟ್ಟಿದ ಪಕ್ಷ ಇದು , ಇವತ್ತು ತಮ್ಮ ಕರ್ತವ್ಯವನ್ನು ಮರೆತು ಅಧಿಕಾರಕ್ಕಾಗಿ ಹೊಂಚು ಹಾಕಿ ಗೋವ, ಹೈದ್ರಬಾದ್ನಲ್ಲಿ ಕುಳಿತ್ತಿದ್ದಾರೇ ಶಾಸಕರು , ಸರಿ ಹಾಗಾದರೆ ವಿಧನಾ ಸಭೆ ವಿಸರ್ಜಿಸಿ ಜಗದೀಶ್ ಶೆಟ್ಟರ್ ಅಥವಾ ರೆಡ್ಡಿಗಳ ನೇತ್ರುತ್ವದಲ್ಲಿ ಚುನಾವಣೆಗೆ ಹೋಗಲಿ , ೧ ರಿಂದ ೧೧೦ ಸ್ಥಾನಕ್ಕೆ ತೆಗೆದುಕೊಂಡು ಬಂದವರು ಯಡಿಯೂರಪ್ಪ ಹೊರತು ಶೆಟ್ಟರ್ ಅಗಲಿ ರೆಡ್ಡಿಗಲಾಗಲಿ ಅಲ್ಲ .

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು