ಬೆಂಗಳೂರು, ನ. 3 : ಬುದ್ಧಿಜೀವಿಗಳು ಇರುವಲ್ಲಿ ಸೌಹಾರ್ದತೆಯ ಸಮಸ್ಯೆ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಬುದ್ಧಿಜೀವಿಗಳಿಂದಲೇ ದೇಶಕ್ಕೆ ಅಪಾಯ ಎದುರಾಗಿದೆ ಎಂದು ರಾಜ್ಯ ಕಾನೂನು ಲೋಕಸೇವಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ವಿ ಎಸ್ ಮಳೀಮಠ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಧಾರ್ಮಿಕ ಸೌಹಾರ್ದತೆಯಲ್ಲಿ ಬುದ್ಧಿಜೀವಿಗಳು ಪಾತ್ರ ಕುರಿತ ಮಾತನಾಡಿದ ಅವರು, ಬುದ್ಧಿಜೀವಿಗಳು ಬರೀ ಬುದ್ಧಿಮಟ್ಟವನ್ನು ಹೆಚ್ಟಿಸಿಕೊಂಡರೆ ಸಾಲದು. ಮೊದಲು ಹೃದಯ ವಿಶಾಲತೆಯನ್ನೂ ಬೆಳೆಸಿಕೊಳ್ಳಬೇಕು ಎಂದರು. ತಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಬದ್ಧತೆ ಬುದ್ಧಿಜೀವಿಗಳಲ್ಲಿ ಬರಬೇಕು. ಬುದ್ಧಿಜೀವಿಗಳು ತಮ್ಮ ಸೇವೆಯನ್ನು ಮುಕ್ತ ಮನಸ್ಸಿನಿಂದ ನೀಡುತ್ತಿಲ್ಲ ಎಂದು ಮಳೀಮಠ ಬೇಸರ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)