clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
ಎನ್ ಡಿಎ ಸೋಲಿಗೆ ವರುಣ್ ಕಾರಣ: ಶರದ್

Sharad yadav
ನವದೆಹಲಿ, ಮೇ.17: ಬಿಜೆಪಿ ಯುವ ನೇತಾರ ವರುಣ್ ಗಾಂಧಿ ಅಲ್ಪಸಂಖ್ಯಾತರ ವಿರುದ್ದ ಅವಹೇಳನಕಾರಿ ಭಾಷಣದ ಮಾಡಿದ್ದೇ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಹೀನಾಯವಾಗಿ ಸೋಲನುಭವಿಸಲು ಕಾರಣವಾಯಿತು ಎಂದು ಜೆಡಿ (ಯು) ಮುಖ್ಯಸ್ಥ ಶರದ್ ಯಾದವ್ ಆರೋಪಿಸಿದ್ದಾರೆ.

ಬಿಜೆಪಿಯ ಭವಿಷ್ಯದ ಪ್ರಧಾನಿ ಎಂದು ನರೇಂದ್ರ ಮೋದಿ ಅವರನ್ನು ಬಿಜೆಪಿಯ ಕೆಲವು ನಾಯಕರು ಬಿಂಬಿಸಿದ್ದು ಪಕ್ಷಕ್ಕೆ ಮುಳುವಾಯಿತು ಎಂದು ಶರದ್ ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎನ್ ಡಿ ಎ ಸೋಲಲು ಕಾರಣವಾದ ಅಂಶಗಳನ್ನು ಪರಿಶೀಲಿಸುತ್ತೇವೆ ಎಂದು ಅವರು ತಿಳಿಸಿದರು.

ವರುಣ್ ಗಾಂಧಿ ಹೇಳಿದ್ದು ಸರಿಯೋ, ತಪ್ಪೋ ಒಟ್ಟಿನಲ್ಲಿ ಅವರ ಭಾಷಣದ ಪ್ರಭಾವ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಅವರ ಹೇಳಿಕೆ ಅಸಂವಿಧಾನಿಕ. ಅವರ ಹೇಳಿಕೆ ದೇಶದ ಏಕತೆಗೆ ಭಂಗ ತರುವ ರೀತಿಯಲ್ಲಿತ್ತು. ಇದು ಚುನಾವಣೆ ಮೇಲೆ ಪರಿಣಾಮ ಬೀರಿತು ಎಂದು ಶರದ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಮೋದಿ ಪಿಎಂ ಹೇಳಿಕೆ ಸೋಲಿಗೆ ಕಾರಣ, ಬಿಜೆಡಿ
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ಮೇ 17, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಗೋಪಾಲಕೃಷ್ಣ
ದಿನಾಂಕ: 18 May 2009 10:48 am
ಇಲ್ಲಿ ಮುಖ್ಯವಾಗಿ ಆದವಾನಿಯವರು ಚುನಾವಣ ಪ್ರಚಾರದಲ್ಲಿ ಪ್ರದಾನಿ ಮನಮೋಹನ್ ವಿರುಧ ಮಾಡಿದ ಟೀಕೆ ಗಳಿಗೆ ಈಗ ಬಿಜೆಪಿಗೆ ಉತ್ತರ ಸಿಕ್ಕಿದೆ ಇಲ್ಲಿ ಆದವಾನಿ ಯವರ ನಾಯಕತತ್ವ್ ಪೂರ್ಣ ವಾಗಿ ಸೋತಿದೆ ಇಲ್ಲಿ ಬಿಜೆಪಿ ಯುವ ನೇತಾರ ವರುಣ್ ಗಾಂಧಿ ಕಾರಣರಲ್ಲ

ಇಂದ: ವರುಣ್
ದಿನಾಂಕ: 17 May 2009 11:56 pm
ಬಾಜಪದವರು ಮಾಡಿದ ಅನಾಚಾರಕ್ಕೆ ಬೆಲೆ ತೆತ್ತಿದ್ದಾರೆ. ಹಿಂದುತ್ವದ ಸೋಗು ಹಾಕುವ ಇವರು ಈಗ ಹಿಂದುತ್ವದ ಪರ ಏರುವ ನಾಯಕ ವರುಣ ವಿರುದ್ದ ಗುಟುರ್ ಹಾಕುತ್ತಿದ್ದಾರೆ. ವರುಣ ಬೆಳೆಯುವ ಭಯ ಇರಬಹುದು. ವರುಣ್ ಪ್ರದಾನ ಮಂತ್ರಿ ಅಭ್ಯರ್ಥಿ ಎಂದರೆ ಮಾತ್ರ ಬಾಜಪ ಅಧಿಕಾರಕ್ಕೆ ಬರಲು ಸಾಧ್ಯ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು