clear
clear
clear
clear
ಮುಖಪುಟ » ಸುದ್ದಿಜಾಲ » It-bt » ಪೂರ್ಣಪಾಠ
ಸತ್ಯಂ ಸಿಇಒ ರಾಮಲಿಂಗರಾಜು ರಾಜೀನಾಮೆ
[IST]

ನವದೆಹಲಿ, ಜ. 7 : ವಂಚನೆ ಹಾಗೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಭಾರಿ ಟೀಕೆಗೆ ಗುರಿಯಾಗಿದ್ದ ದೇಶದ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಸತ್ಯಂ ಕಂಪ್ಯೂಟರ್ಸ್ ನ ಸಂಸ್ಥಾಪಕ ಹಾಗೂ ಚೇರಮನ್ ರಾಮಲಿಂಗರಾಜು ಅವರು ಕಂಪನಿಯ ಅಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಸತ್ಯಂ ಕಂಪ್ಯೂಟರ್ಸ್ ಭಾರಿ ಸುದ್ದಿಯಲ್ಲಿತ್ತು. ಸತ್ಯಂ ಚೇರಮನ್ ರಾಮಲಿಂಗರಾಜು ಕಂಪನಿಯ ಕೋಟ್ಯಂತರ ರುಪಾಯಿಗಳ ಹಣವನ್ನು ಅವ್ಯವಹಾರ ಮಾಡಿದ್ದಾರೆ. ಹಾಗೂ ತಮ್ಮ ಕುಟುಂಬದ ಸಲುವಾಗಿ ಕಂಪನಿಯ ಹಿತಾಸಕ್ತಿಯನ್ನು ಬಲಿ ತೆಗೆದುಕೊಂಡಿದ್ದಾರೆ ಎಂದು ಆಡಳಿತ ಮಂಡಳಿ ಹಾಗೂ ಷೇರುದಾರರು ರಾಮಲಿಂಗರಾಜು ವಿರುದ್ಧ ತಿರುಗಿ ಬಿದ್ದಿದ್ದರು. ವಿಶ್ವಸಂಸ್ಥೆ ಕೂಡ ಸತ್ಯಂ ಕಂಪೆನಿ ಮೇಲೆ 10 ವರ್ಷಗಳ ಆರ್ಥಿಕ ನಿರ್ಬಂಧ ಹೇರಿತ್ತು.

ರಾಮಲಿಂಗರಾಜು ಅವರು ಅವ್ಯವಹಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ರಾಜು ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿದ್ದು, ಈ ಶನಿವಾರ ನಡೆಯಲಿರುವ ಸತ್ಯಂ ಆಡಳಿತ ಮಂಡಳಿ ಮಹತ್ವದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಂಡಳಿಯ ಮೂಲಗಳು ತಿಳಿಸಿವೆ.

ಕಂಪನಿಯ ಅವ್ಯವಹಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಾಫ್ಟವೇರ್ ಸೇವೆ ಒದಗಿಸುತ್ತಿದ್ದ ಅಮೆರಿಕ ಮೆರೀಲ್ ಲಿಂಚ್ ಕಂಪನಿಯ ಸತ್ಯಂ ಜೊತೆಗಿನ ಒಡಂಬಡಿಕೆಯನ್ನು ಕೈಬಿಟ್ಟಿತ್ತು. ಕಂಪನಿಯ ಷೇರುಗಳು ಗಮನಾರ್ಹವಾಗಿ ಕುಸಿತ ಕಂಡಿದ್ದವು. ರಾಜು ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ರಾಮ್ ಮಿನ್ ಪಾಟಿ ಎಂಬುವವರು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)
ತ್ರೈಮಾಸಿಕ :ಸತ್ಯಂ ಕಂಪ್ಯೂಟರ್ ಗೆ ಶೇ. 42 ರ ಲಾಭ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು