clear
clear
clear
clear
   
  BSE  13,853.70 +453.38   NSE  4111.40 +137.35   RS/$ 49.40 71.00  at:16:10 Hrs (IST) Jul 14  
clear
  ಮುಖಪುಟ    ಸುದ್ದಿಜಾಲ    ಸಿಟಿಜನ್ ಜರ್ನಲಿಸಂ    ಚಲನಚಿತ್ರ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಅಡುಗೆ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
   ಮಹಾಚುನಾವಣೆ
 ವಾರ್ತೆಗಳು
   ಕ್ರೀಡೆ
   ಯಡ್ಡಿ ಆಡಳಿತ
   ರಾಜಕೀಯ
   ಐಟಿ-ಬಿಟಿ
   ಬೆಂಗಳೂರು
   ಸಭೆ ಸಮಾರಂಭ
   ಸುದ್ದಿ-ಚಿತ್ರ
   ವಿಡಿಯೋ
ಮುಖಪುಟ » ಸುದ್ದಿಜಾಲ » ವಾರ್ತೆಗಳು » ಪೂರ್ಣಪಾಠ
ಜೆಪಿನಗರ ದೇವಸ್ಥಾನದಲ್ಲಿ ಅನಿತಾ
[IST]

Anitha HDK offer prayers in J.P. Nagar temple
thatsKannada RSS feed thatsKannada igoogle gadgets FREE SMS alerts
ಬೆಂಗಳೂರು, ಜ. 7 : ವೈಕುಂಠ ಏಕಾದಶಿಯ ದಿನವಾದ ಇಂದು ಸ್ವರ್ಗದ ಬಾಗಿಲುಗಳು ತೆರೆದುಕೊಂಡವು. ದೇವರ ದರ್ಶನ ಮಾಡಲು ಬೆಂಗಳೂರಿನ ನಾನಾ ದೇವಾಲಯಗಳಲ್ಲಿ ಭಾರಿ ಜನಸಂದಣಿ ಕಂಡುಬಂದಿದೆ. ವಿಶೇಷವಾಗಿ ವೆಂಕಟರಮಣ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಭಾಗ್ಯ ಪಡೆಯಲು ಸಾವಿರಾರು ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದಾರೆ.

ವಾಣಿವಿಲಾಸ ಆಸ್ಪತ್ರೆ ಸಮೀಪದ ವೆಂಕಟರಮಣ ಸ್ವಾಮಿ ದೇವಾಲಯದ ಮುಂದೆ ಜನ ಜಮಾಯಿಸಿದ್ದರಿಂದ ಜನನಿಬಿಡ ರಸ್ತೆಯಲ್ಲಿ ಬೆಳಗಿನಿಂದ ಸಂಚಾರ ದಟ್ಟಣೆ ಉಂಟಾಯಿತು. ದೇವಗಿರಿ ಬೆಟ್ಟದ ಸ್ವಾಮಿಯ ದರ್ಶನಕ್ಕೆ ಭಕ್ತ ಸಮುದಾಯ ಮೈಲುದ್ದ ಕ್ಯೂ ನಿಂತಿದ್ದು ಭಕ್ತಿಪರವಶತೆಯ ಚಿತ್ರಗಳು ಬನಶಂಕರಿ ಎರಡನೇ ಹಂತದ ಪ್ರದೇಶದಲ್ಲಿ ಸಾಮಾನ್ಯವಾಗಿದೆ.

ಇದೇ ರೀತಿ, ಜೆಪಿ ನಗರದ ಲಕ್ಷ್ಮೀ ವೆಂಕಟೇಶ್ವರ ದೇವಾಲಯಲ್ಲೂ ಸಹ ಜನಜಾತ್ರೆ ನೆರೆದಿದೆ. ಬಡವ ಶ್ರೀಮಂತ ಬೇಧಭಾವ ಇಲ್ಲದೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು ಕಾಣುತ್ತಿದೆ. ಈ ದೇವಸ್ಥಾನಕ್ಕೆ ಇಂದು ಬೆಳಗ್ಗೆ ತಮ್ಮ ಕುಟುಂಬದ ಸದಸ್ಯರ ಜತೆಗೂಡಿ ಬಂದ ಮಧುಗಿರಿಯ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಾವೊಬ್ಬ ಶಾಸಕಿ ಎಂಬ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು.
(ದಟ್ಸ್ ಕನ್ನಡ ವಾರ್ತೆ)
ಮಾಲ್ಡವೀಸಿಗೆ ರಾಧಿಕಾ ಕುಮಾರಣ್ಣ ಪ್ರವಾಸ

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಎಂಡ್ತಿ ಇಲ್ದವ
ದಿನಾಂಕ: 09 Jan 2009 7:19 am
ಅವ್ನೆ ಎರಡು ಹೆಮ್ದ್ರನ್ನ ಮಾಡಿಕ್ಕಂದವ್ನೆ ಕುಮಾರನದೇನ್ರಲಾ ತೆಪ್ಪು, ಸಾಮಿ ಎನ್ಗಥೆಸ್ವರಾ ಇಬ್ರುನ್ನು ಸುದಾರಸದೆನ್ಗೆ ಅನಾದ ಒಸಿ ತಿಳುಸ್ಕೋದು ಸಾಕು

ಇಂದ: ಶ್ಯಾಮಾ ಪ್ರಸಾದ್ ಸಜಂಕಿಲ
ದಿನಾಂಕ: 08 Jan 2009 10:47 am
ಇದನ್ನು ನ್ಯೂಸ್ ರೀತಿಯಲ್ಲಿ ಹಾಕುವಷ್ಟು ಏನಿದೆ? ಯಾಕೆ ಅಷ್ಟು ಪ್ರಾಧಾನ್ಯತೆ ಕೊಡುತ್ತೀರಿ? ಸಾಲಿನಲ್ಲಿ ಆಕೆಯ ಹಿಂದೆ ಮುಂದೆ ನಿಂತವರ ಬಗ್ಗೆ ಯಾಕೆ ಬರೆಯಲಿಲ್ಲ? ದಯವಿಟ್ಟು ಇಂಥಾ ಕ್ಷುಲ್ಲಕ ವಿಷಯಗಳನ್ನು ನ್ಯೂಸ್ ಮಾಡಬೇಡಿ. ಮಾಡಿ ನಿಮ್ಮ ಪತ್ರಿಕೆಯ ಪ್ರಾಧಾನ್ಯತೆ, ಘನತೆ ಕಮ್ಮಿ ಮಾಡಿಕೊಳ್ಳಬೇಡಿ.

[ ಅಭಿಪ್ರಾಯ ಬರೆಯಿರಿ ]
 
 
 
 ಬೆಂಗಳೂರ ಹೊಟೇಲುಗಳಲ್ಲಿ ವಿಶೇಷ ಕೊಡುಗೆ
 ಬಾಲಿಯಲ್ಲಿನ ಅತ್ಯಂತ ಜನಪ್ರಿಯ ಹೊಟೇಲುಗಳು
ThatsKannada
ThatsKannada
 ಅಡುಗೆಮನೆಯ ಗೊಣಗಾಟ ನಿಲ್ಲಿಸಲು ಇಲ್ಲಿವೆ ಕೆಲ ಉಪಾಯ
 ನಾಟಕ ವಿಮರ್ಶೆ : ಸೇವಂತಿ ಯಾ ಮಿಸ್ ಸೇವಂತಿ
 ಸಲಿಂಗಿಗಳ ಹೋರಾಟದ ಹಿಂದಿನ ಕೈ ಯಾರದು?
 ಸ್ವಿಟ್ಜರಲಂಡಲ್ಲಿ ಭೂತಕೋಲ ಮುಖವಾಡ ಪ್ರಾತ್ಯಕ್ಷಿಕೆ
 ಒಂದು ರುಚಿಕಟ್ಟಾದ ಪದಾರ್ಥ ಮತ್ತು ಪೇಚಿನ ಪ್ರಸಂಗ
ThatsKannada
ThatsKannada
ನಿಮ್ಮ ಮತ ಚಲಾಯಿಸಿ
ThatsKannada
ThatsKannada
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ThatsKannada
 
Recommended Links
     Become fans of Namitha, Trisha, Katrina, Deepika, Barbara Mori, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India