clear
clear
clear
clear
ಮುಖಪುಟ » ಸುದ್ದಿಜಾಲ » ರಾಜಕೀಯ » ಪೂರ್ಣಪಾಠ
'ಧೈರ್ಯವಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಿ'
[IST]

ಬೆಂಗಳೂರು, ಜ. 6 : ನೈಸ್ ವಿಚಾರದಲ್ಲಿ ಸತ್ಯಾಂಶ ಬಯಲಾಗಲಿದೆ ಎನ್ನುವ ಭಯದಿಂದ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಿಂದೇಟು ಹಾಕಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಲೇವಡಿ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ ಎಂದು ಗೌಡರು ಮರು ಸವಾಲು ಹಾಕಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ಆ ಭಯದಿಂದಲೋ ಏನೊ ಯಡಿಯೂರಪ್ಪ ವಿರೋಧ ಪಕ್ಷಗಳೊಂದಿಗೆ ಸುಮಧುರ ಬಾಂಧವ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಆರಂಭದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದ ಅವರು, ಈಗ ಅದಕ್ಕೆ ವಿರುದ್ಧವಾದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಸುಪ್ರಿಂಕೋರ್ಟನ್ನು ವಂಚಿಸಲು ನೈಸ್ ಸಂಸ್ಥೆಯವರು ಅಧಿಕಾರಿಗಳು, ರಾಜಕಾರಣಿಗಳನ್ನು ಹೇಗೆ ಬಳಿಸಿಕೊಂಡರು ಎಂಬುದನ್ನು ತಾವು ಪುಸ್ತಕ ರೂಪದಲ್ಲಿ ಹೊರತಂದಿದ್ದು, ಅದನ್ನು ಜನತೆಯ ಮುಂದೆ ಇಡುತ್ತೇವೆ. ಪುಸ್ತಕದ ಪ್ರತಿಯನ್ನು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಸತ್ ಸದಸ್ಯರು, ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಗಣ್ಯರಿಗೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ವಿಜಿ
ದಿನಾಂಕ: 07 Jan 2009 8:57 am
ಗೌಡರು ಹೆಲಿದೊರಲ್ಲಿ ತಪ್ಪೇನಿದೆ ಅಂತ ಗೊತ್ತಾಗಲಿಲ್ಲ..ಗೌಡರು ಏನು ಹೇಳಿದರೂ ಕೊಡ ನಾಯಿಗಳು ಬೊಗಳುತ್ತಲೇ ಇರುತ್ತವೆ..ನಿಜವಾಗಿ ಹ ಕಂತ್ರಿ ಯಡ್ಡಿ ಗೂ ಹ ಕೆನಿ ಗೂ ಏನೂ ವ್ಯಾವಹಾರ ಇಲ್ಲ ಅಂದ್ರೆ ಮಾನ ನಷ್ಟ ಮುಕೊದ್ದಮೆ ಹಾಕಬೇಕು..ಕೇಸ್ ಹಾಕೂ ಅಂದರೆ ಯಾಕೆ ಹಾಗೋಲ್ಲ ಅಂತ ಅರ್ಥ ಆಗೋಲ್ಲ.. ಅಲ್ಲಿಗೆ ತಪ್ಪು ನಡೆದಿರ ಬೇಕು ಅಲ್ವ..ಅದಕ್ಕೆ ಲಿಂಗ ಗಳಿಗೆ ಟೆನ್ಶನ್ ಶುರು ಹಾಗಿರಬೇಕು..ಅದಕ್ಕೆ ಬೊಗಲೋಕೆ ಶುರು ಮಾಡಿದ್ದಾವೆ..ಗೌಡರೇ ನೀವು ಹೆದರಬೇಡಿ ನಿಮ್ಮದು ಏನೂ ಕಿತುಕೊಲ್ಲೋಕೆ ಹಾಗೋಲ್ಲ ಹಿ ಕಂತ್ರಿ ನಾಯಿಗಳಿಗೆ..

ಇಂದ: ಶಿವ
ದಿನಾಂಕ: 06 Jan 2009 4:47 pm
ಗೌಡ ಕಿ ಜೈ . ಗೌಡ ಜಿನ್ಧಬಾದ್ . ಗೌಡ ರ ಗೌಡ ಈ ನಮ್ಮ ದೇವೇಗೌಡ .

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು