clear
clear
clear
clear
x

ಹೊನ್ನಾಪುರದಲ್ಲಿ ಮೈದಳೆದ ಪುಟಾಣಿ ಪಾರ್ಟಿ

ಮಂಗಳವಾರ, ಜುಲೈ 14, 2009, 18:05[IST]
Vote this article
Up  
Down  


{image-14-ramachandra-pn1.jpg thatskannada.oneindia.in}ಮಕ್ಕಳ ಹಕ್ಕು, ಸಾಮಾಜಿಕ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳನ್ನು ಮಕ್ಕಳ ಚಿತ್ರದ ಮೂಲಕ ಹೇಗೆ ಪರಿಣಾಮಕಾರಿಯಾಗಿ ತೋರಿಸಬಹುದು ಎಂಬುದಕ್ಕೆ 'ಪುಟಾಣಿ ಪಾರ್ಟಿ' ಚಿತ್ರವೇ ಸಾಕ್ಷಿ. ಗ್ರಾಮಪಂಚಾಯಿತಿಯಂತಹ ಸ್ಥಳೀಯ ಆಡಳಿತದಲ್ಲಿ ಮಕ್ಕಳ ಸಮಿತಿಯೊಂದು ಮಹತ್ವದ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ. ಅಲ್ಲಿನ ಸಮಸ್ಯೆಗಳ ವಿರುದ್ಧ ಮಕ್ಕಳು ತಿರುಗಿ ಬಿದ್ದು ದೊಡ್ಡವರ ಕಣ್ಣು ತೆರೆಸುವ ಕಥಾ ಹೂರಣವನ್ನು ಚಿತ್ರ ಒಳಗೊಂಡಿದೆ.

ಚಿಲ್ಡ್ರನ್ಸ್ ಫಿಲಂ ಸೊಸೈಟಿ ನಿರ್ಮಿಸಿರುವ ಈ ಚಿತ್ರವನ್ನು ಪಿ ಎನ್ ರಾಮಚಂದ್ರ ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ.ನಿರ್ದೇಶಕರು ಪುಣೆಯ ಫಿಲ್ಮ್ ಮತ್ತು ಟೆಲಿವಿಷನ್ ಇನಿಸ್ಟಿಟ್ಯೂಟ್ ನ ಪದವೀಧರರು ಹೌದು. ಅವರ ನಿರ್ದೇಶನದ 'ಸುಧಾ' ಚಿತ್ರ 2007ರಲ್ಲಿ ನವದೆಹಲಿಯಲ್ಲಿ ನಡೆದ ಓಸಿಯನ್ ಸಿನಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಪ್ರಶಸ್ತಿಯನ್ನು ಗಳಿಸಿತ್ತು. ಪುಟಾಣಿ ಪಾರ್ಟಿ ಅವರ ನಿರ್ದೇಶನದ ಎರಡನೇ ಚಿತ್ರ.

ಧಾರವಾಡ ಜಿಲ್ಲೆಯ ಹೊನ್ನಾಪುರ ಎಂಬ ಗ್ರಾಮದಲ್ಲಿ 'ಪುಟಾಣಿ ಪಾರ್ಟಿ' ಚಿತ್ರವನ್ನು ಸಂಪೂರ್ಣವಾಗಿಚಿತ್ರಿಸಲಾಗಿದೆ. ಸ್ಥಳೀಯ ಕಲಾವಿದರು ಹಾಗೂ ಹೊಸಬರು ಚಿತ್ರದ ಪಾತ್ರಧಾರಿಗಳು. ಚಿತ್ರದಲ್ಲಿ ಮಕ್ಕಳ ಆಸರೆಗೆ ಸಹಾನುಭೂತಿಯುಳ್ಳ ಶಾಲಾ ಶಿಕ್ಷಕರೊಬ್ಬರು ನೆರವಾಗುತ್ತಾರೆ. ಚಿತ್ರದಲ್ಲಿನ ಆಡುಭಾಷೆಯ ಸೊಗಡು ಸೊಗಸಾಗಿದೆ.

''ಭಾರತದಲ್ಲಿಮಕ್ಕಳ ಚಿತ್ರ ಎಂದರೆ ಸಾಮಾನ್ಯವಾಗಿ ಜಾದೂ ಅಂಶಗಳಿರಬೇಕು ಅಥವಾ ಸಾಹಸ ಮನೋಭಾವದ್ದಾಗಿರಬೇಕು ಎಂಬ ಪರಿಕಲ್ಪನೆ ಇದೆ. ಇದರ ಹೊರತಾಗಿ ಆಲೋಚಿಸುವಂತಿರಬೇಕು.ಮದ್ಯಪಾನದಂತಹ ಸಾಮಾಜಿಕ ಅಂಶಗಳೊಂದಿಗೆ ಮಕ್ಕಳ ಚಿತ್ರ ಮಾಡುವುದೆಂದರೆ ನಿಜಕ್ಕೂ ದೊಡ್ಡ ಸವಾಲು'' ಎನ್ನುತ್ತಾರೆ ನಿರ್ದೇಶಕ ರಾಮಚಂದ್ರ.

ಧಾರವಾಡದ ಹಳ್ಳಿಯೊಂದರಲ್ಲಿ 19 ದಿನಗಳ ಕಾಲ ಸ್ಥಳೀಯ ರಂಗ ಕಲಾವಿದರನ್ನು ಬಳಸಿಕೊಂಡು ಈ ಚಿತ್ರವನ್ನು ತೆರೆಗೆ ತರಲಾಗಿದೆ. ಅವರಲ್ಲಿ ಕೆಲವರು ಆಟೋರಿಕ್ಷಾ ಚಾಲಕರು, ದಿನಸಿ ಅಂಗಡಿ ಇಟ್ಟುಕೊಂಡಿರುವವರು, ಪರಿಸರದ ಬಗ್ಗೆ ಕಾಳಜಿಯುಳ್ಳವರು, ಕಂಪ್ಯೂಟರ್ ಗ್ರಾಫಿಕ್ಸ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಮ್ಮ ಚಿತ್ರೀಕರಣದ ಅನುಭವಗಳನ್ನು ವಿವರಿಸಿದರು.

{image-14-putaani-party6.jpg thatskannada.oneindia.in}ಎಲ್ಲರೂ ಸಿನಿಮಾ ಮಾಧ್ಯಮಕ್ಕೆ ಹೊಸಬರು. ಮೂರು ದಿನಗಳ ಕಾಲ ಚಿತ್ರೀಕರಣ ಪೂರ್ವ ಕಾರ್ಯಾಗಾರ ನಡೆಸಿ ಮಕ್ಕಳು ಕ್ಯಾಮೆರಾ ಎದುರಿಸುವಂತೆ ಅಣಿಗೊಳಿಸಲಾಯಿತು. ಹತ್ತನೇ ದಿನದ ಚಿತ್ರೀಕರಣದ ಹೊತ್ತಿಗೆ ಅವರೆಲ್ಲಾ ಒಂದೇ ಟೆಕ್ ಗೆ ಓಕೆ ಎನ್ನುವಂತೆ ನಟಿಸಿದರು! ಎಂದು ತಮ್ಮ ಅನುಭವಗಳನು ಸ್ಮರಿಸಿದರು ನಿರ್ದೇಶಕರು.

ಸಮೀರ್ ಮಹಾಜನ್ (ಛಾಯಾಗ್ರಹಣ), ಅರುಣಾಭಾ ಮುಖರ್ಜಿ (ಸಂಕಲನ), ಅಲೋಕ್ ಡೆ (ಧ್ವನಿ ಗ್ರಹಣ), ಸಂತೋಷ್ ಕುಮಾರ್ (ಧ್ವನಿಗ್ರಹಣ ಮತ್ತು ವಿನ್ಯಾಸ), ವಿಜಯ್ ಪ್ರಕಾಶ್ (ಸಂಗೀತ ನಿರ್ದೇಶನ), ಅಪುರ್ಬ ಬ್ಯಾನರ್ಜಿ (ಕಲಾ ನಿರ್ದೇಶನ). ಚಿತ್ರದಲ್ಲಿ ಬಾಲ ಕಲಾವಿದರು ಒಳಗೊಂಡಂತೆ 30 ಕ್ಕೂ ಅಧಿಕ ಕಲಾವಿದರಿದ್ದಾರೆ.



ಜುಲೈ 14, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: parwatisingari
ದಿನಾಂಕ: 17 Jul 2009 9:37 am
all the best can we have a screening at our town?

ಇಂದ: jyothi
ದಿನಾಂಕ: 16 Jul 2009 10:52 pm
It is a real pleasure to see such a movie being done. I wish you all the best !

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು