"ಕ್ಷಣ ಕ್ಷಣ" ಚಿತ್ರದ ಸೋಲಿನಿಂದ ಕ್ಷಣ ಕಾಲ ದೂರಸರಿದಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ದೇಸಾಯಿ ನಿರ್ದೇಶನದ ಹೊಸ ಚಿತ್ರ "ಸರಿಗಮ". ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ದೇಸಾಯಿ ಅವರೇ ವಹಿಸಿಕಕೊಂಡಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷ ಇಳಯರಾಜ ಅವರ ಸಂಗೀತ. ಇಳಯರಾಜ ಅವರು ಸಂಗೀತ ನೀಡುವುದಕ್ಕೆ ಲಕ್ಷಗಟ್ಟಲೆ ಹಣ ಕೇಳುತ್ತಾರೆ ಎಂಬ ವರದಿಗಳ ನಡುವೆಯೂ ಅವರು ಕನ್ನಡ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಆಶ್ಚರ್ಯವನ್ನೇ ಉಂಟುಮಾಡುತ್ತದೆ.
ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಬೇಕಷ್ಟೆ. ಮೂಲಗಳ ಪ್ರಕಾರ ಆಕೆ ಕನ್ನಡದ ಖ್ಯಾತ ನಿರ್ದೇಶಕರೊಬ್ಬರ ಮಗಳ೦ತೆ. ಎಕ್ಸ್ಕ್ಯೂಸ್ ಮಿ ಚಿತ್ರದ ಸುನಿಲ್ ರಾವ್ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಿಂದೆ ದೇವರಾಜ್ ಅಭಿನಯದ "ತರ್ಕ" ದೇಸಾಯಿಯವರಿಗೆ ಹೆಸರು ತಂದು ಕೊಟ್ಟಿತು. ಈಗ ಅವರ ಮಗ ಪ್ರಜ್ವಲ್ ದೇವರಾಜ್ ಸರದಿ. ದೇಸಾಯಿಯವರ ಈ ಚಿತ್ರ ಕನ್ನಡಕ್ಕೆ ಮತ್ತೊಂದು "ನಿಷ್ಕರ್ಷ" ಅಥವಾ "ನಮ್ಮೂರ ಮಂದಾರ ಹೊವೇ" ಆಗಲಿ ಎನ್ನುವುದೇ ಕನ್ನಡ ಚಿತ್ರಪ್ರೇಮಿಗಳ ಆಶಯ.
ರ ಇತರೆ ಸುದ್ದಿ/ಲೇಖನಗಳನ್ನು ಓದಿ