ಬರಹಗಾರರನ್ನು ಚುಚ್ಚಬೇಡಿ, ಪ್ರೋತ್ಸಾಹಿಸಿಬರಹಗಾರರು ತಮ್ಮ ಬರಹಗಳಲ್ಲಿ ಮಾತ್ರ ಮಾನವೀಯತೆ, ಪ್ರೀತಿ, ಅಂತಃಕರಣ, ಕನಿಕರಗಳನ್ನು ತೋರಿ ಶಹಭಾಸ್ಗಿರಿ ಪಡೆಯುತ್ತಾರೆಯೇ ಹೊರತು ನಿಜಜೀವನದಲ್ಲಿ ಇದ್ಯಾವುದಕ್ಕೂ ಸ್ಪಂದಿಸದೆ ತೆಪ್ಪಗೆ ಕುಳಿತುಬಿಡುತ್ತಾರೆ ಎಂಬ ಗಂಭೀರವಾದ ಆರೋಪವನ್ನು ಜಾಲತಾಣವೊಂದರಲ್ಲಿ ಸಹೃದಯರೋರ್ವರು ಮಾಡಿದ್ದಾರೆ.ಉತ್ತರ ಕರ್ನಾಟಕದ ಪ್ರವಾಹಸಂತ್ರಸ್ತರಿಗೆ ಅಗತ್ಯವಾಗಿರುವ ನೆರವಿನ ವಿಷಯದಲ್ಲಿ ಈ ರೀತಿ ಆರೋಪ ಮಾಡಿರುವ ಆ ಸಹೃದಯರ ಸಾಮಾಜಿಕ ಕಳಕಳಿ ಮೆಚ್ಚುವಂಥದು. ಆದರೆ ಆರೋಪ ಮಾತ್ರ ಒಪ್ಪುವಂಥದಲ್ಲ.
ಸಂಪ್ರದಾಯ ಧಿಕ್ಕರಿಸುವ ಕೇಶಮುಂಡನ ಎಷ್ಟು ಸರಿ?ಯಾಹೂನ ಒಂದು ಇಮೇಲ್ ಗ್ರೂಪ್ನೊಳಗೆ ಇತ್ತೀಚೆಗೆ ಒಂದು ಚರ್ಚೆ ನಡೆಯಿತು. ಯಾರೋ ಒಬ್ಬ ಮಹಾಶಯರಿಗೆ ಇದ್ದಕ್ಕಿದ್ದಂತೆ ಒಂದು ಜಿಜ್ಞಾಸೆ ತಲೆದೋರಿತು. ಅದೇನೆಂದರೆ, ಅವರ ಆರು ವರ್ಷದ ಮಗಳಿಗೆ ಕೆಲವು ಕಾರಣಗಳಿಂದಾಗಿ ಕೇಶಮುಂಡನ ಮಾಡಿಸಬೇಕಾದ ಪರಿಸ್ಥಿತಿ ಉಂಟಾಯಿತು. ಆದರೆ, ಹೆಣ್ಣುಮಕ್ಕಳ ಕೇಶ ಕತ್ತರಿಸುವುದಕ್ಕೆ ನಮ್ಮ ಹಿಂದೂ ಸಂಪ್ರದಾಯ ಒಪ್ಪುತ್ತದೋ ಬಿಡುತ್ತದೋ ಎಂಬ ಸಂದೇಹ ಅವರನ್ನು ಕಾಡಿತು.ತಲತಲಾಂತರಗಳಿಂದ ಅವರ..
ಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣ 'ಕೈ'ಬಿಡಿಹೆಬ್ಬಗೋಡಿ ಚರ್ಚ್ ಮೇಲಿನ ದಾಳಿ ಯಾರೇ ಮಾಡಿರಲಿ ಅದು ಖಂಡನೀಯ. ದಾಳಿಕೋರರು ಶಿಕ್ಷಾರ್ಹರು. ಆದರೆ, ಇಂಥ ದಾಳಿಗಳು ನಡೆದಕೂಡಲೇ ಅವೆಲ್ಲ ಬಿಜೆಪಿಯದೇ ಕೈವಾಡ ಎಂದು ಕೂಗೆಬ್ಬಿಸುವುದು ಮಾತ್ರ ಸರಿಯಲ್ಲ. ವಿಧಾನಮಂಡಲದ ವಿಶೇಷ ಅಧಿವೇಶನ ನಡೆದಿರುವ ಸಂದರ್ಭದಲ್ಲೇ ಹೆಬ್ಬಗೋಡಿ ದಾಳಿ ನಡೆದಿರುವುದು ಬಿಜೆಪಿಗೆ ಕೆಟ್ಟ ಹೆಸರು ತರಲು ಬೇರೆ ರಾಜಕೀಯ ಪಕ್ಷ(ಗಳು) ಹೂಡಿರುವ ಸಂಚಿರಬಹುದು ಎಂಬ ಅನುಮಾನವೂ ಬರದಿರದು...
ಸಂವಾದ : ರಾಷ್ಟ್ರ ಭಾಷೆ ಹಿಂದಿಯೇ ಆಗಬೇಕೆ?2-3 ಶತಮಾನಗಳಷ್ಟು ಹಳೆಯದಾದ ಹಿಂದಿ ಭಾಷೆಯೇ ಏಕೆ ರಾಷ್ಟ್ರಭಾಷೆಯಾಗಬೇಕು? ಸಾಕಷ್ಟು ಐತಿಹ್ಯವುಳ್ಳ, ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಇನ್ನೂ ಬೆಳೆಯುತ್ತಿರುವ ಕನ್ನಡ, ತಮಿಳು, ತೆಲಗು, ಬಂಗಾಳಿ ಭಾಷೆಗಳಿಗೆ ಯಾಕೆ ಈ ಸ್ಥಾನಮಾನ ಸಿಗಬಾರದು?* ಚಿ.ಮ. ಗುರುಪ್ರಸಾದ್ಭಾರತ 63ನೇ ಸ್ವಾತಂತ್ರೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ, ರಾಷ್ಟ್ರೀಯ ಮಹತ್ವ ಪಡೆದಿರುವ ವಿಷಯಗಳ ಬಗ್ಗೆ ಮೆಲಕು ಹಾಕುತ್ತಿರುವಾಗ ಒಂದು ವಿಚಾರ ಹೊಳೆದದ್ದು ಎಂದರೆ,..
ನಾಡಗೀತೆ : ವಿವಾದಿತ ಚರಣಕ್ಕೆ ಕತ್ತರಿಬೆಂಗಳೂರು : ಕುವೆಂಪು ವಿರಚಿತ ನಾಡಗೀತೆಯಲ್ಲಿ ಮಧ್ವಾಚಾರ್ಯರ ಹೆಸರಿನ ಸೇರ್ಪಡೆ ಕುರಿತಂತೆ ಎದ್ದಿದ್ದ ವಿವಾದಕ್ಕೆ ರಾಜ್ಯ ಸರಕಾರ ತೆರೆ ಎಳೆದಿದೆ. ‘ ಶಂಕರ, ರಾಮಾನುಜ, ಬಸವೇಶ್ವರ ’ ರು ಇರುವ ಚರಣ ಹೊರತುಪಡಿಸಿ ಒಂದು ಪಲ್ಲವಿ ಹಾಗೂ ಎರಡು ಚರಣಗಳನ್ನು ನಾಡಗೀತೆಯಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.ಜ.7ರಂದು (ಸಂಕಇ 207 ಕಸಧ 2003) ಈ ಕುರಿತು ಅಧಿಕೃತ..