clear
clear
clear
clear
   
  BSE  16,848.83 +152.80   NSE  4998.95 +46.30   RS/$ 46.50 -0.21  at:16:10 Hrs (IST) Nov 13  
clear
  ಮುಖಪುಟ    ಜಾಹೀರಾತುದರ    ಸುದ್ದಿಜಾಲ    ಚಲನಚಿತ್ರ    ಅಡುಗೆ    ಎನ್‌ಆರ್‌ಐ    ಅಂಕಣ    ಸಾಹಿತ್ಯ    ಚೌಚೌ    ಗ್ಯಾಲರಿ    ಕಾಮಸೂತ್ರ    ಸಂಪರ್ಕ    Font Help    Twitter thatsKannada Twitter
 ಬೈಕಂಪಾಡಿ
   ರವೀಂದ್ರ
   ಅರ್ಚನಾ
   ಉಪಾಧ್ಯಾಯ
   ಪಟಗಾರ್
   ಉಮೇಶ್ ಮಂಡ್ಯ
   ಪಾಶಾ
   ಮತ್ತೂರು ರಘು
   ಪೂರ್ಣಚಂದ್ರ
   ರಾಜೇಶ್
ಮುಖಪುಟ » ನಾಗರಿಕ ಪತ್ರಕರ್ತ » K-mohan » ಪೂರ್ಣಪಾಠ
ಕೆಸರು ಕದ್ದೆಯಾಗಿರುವ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣ
* ಕೆ. ಮೋಹನ್, ಶಿವಮೊಗ್ಗ

Pathetic state of Shivamogga pvt bus stand
ಶಿವಮೊಗ್ಗ, ಜು. 4 : ಮುಖ್ಯ ಮಂತ್ರಿ ಯಡಿಯೂರಪ್ಪರವರ ತವರು ಜಿಲ್ಲೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಕಾಲಿಟ್ಟರೆ ನರಕಕ್ಕೆ ಹೋದಂತೆ ಭಾಸವಾಗುತ್ತಿದೆ. ಏಕೆಂದರೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಈ ಖಾಸಗಿ ಬಸ್ ನಿಲ್ದಾಣ ನಿರ್ವಹಣೆ ಇಲ್ಲದೇ ಕೆಸರು ಗದ್ದೆಯಂತಾಗಿರುವುದು ನಿಜಕ್ಕೂ ಶೋಚನೀಯ.

ಜಿಲ್ಲೆಯ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅವರೇ ಹೊಂದಿದ್ದಾರೆ. ಆದರೆ, ಜನತೆಯ ದೌರ್ಭಾಗ್ಯವೋ ಅಥವಾ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿಲ್ಲವೋ ಒಟ್ಟಾರೆಯಾಗಿ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ನಡೆದಾಡಲು ಪರದಾಡುವಂತಾಗಿದೆ. ನಿತ್ಯ ಇಲ್ಲಿಂದ ತೀರ್ಥಹಳ್ಳಿ, ಹೊಸನಗರ, ಉಡುಪಿ, ಮಂಗಳೂರು, ಕುಂದಾಪುರ, ಚಿತ್ರದುರ್ಗ, ದಾವಣಗೆರೆ, ಹೊನ್ನಾಳಿ ಹೀಗೆ ನಾನಾ ಭಾಗಗಳಿಗೆ ಖಾಸಗಿ ಬಸ್‌ಗಳು ಸಂಚರಿಸುತ್ತದೆ. ದಿನನಿತ್ಯ ಸಂಚಿಸುವ ಸಾವಿರಾರು ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಬಂದಿರುವ ಸಣ್ಣ ಮಳೆಗೇ ಕೆಸರು ಗದ್ದೆಯಂತಾಗಿ ಹೋಗಿರುವ ಬಸ್ ನಿಲ್ದಾಣ ಜಡಿಮಳೆ ಸುರಿದರೆ ಸುರಿದರೆ ಇಲ್ಲಿ ಅಡ್ಡಾಡುವುದು ಊಹಿಸುವುದೂ ಅಸಾಧ್ಯ. ದುರಂತವೇನೆಂದರೆ ಇಲ್ಲಿ ದಿನನಿತ್ಯ ಒಬ್ಬರಲ್ಲಾ ಒಬ್ಬ ಸಚಿವರು ಭೇಟಿ ನೀಡುತ್ತಲೇ ಇರುತ್ತಾರೆ. ಜೊತೆಗೆ ಬಿಜೆಪಿಯದ್ದೇ ಪ್ರಾಬಲ್ಯ. ಇಷ್ಟಿದ್ದರೂ ಖಾಸಗೀ ಬಸ್ ನಿಲ್ದಾಣ ಮಾತ್ರ ದಿಕ್ಕಿಲ್ಲದೆ ಅನಾಥವಾಗಿದೆ. ಹೀಗಿದ್ದರೂ ಪ್ರಯಾಣಿಕರು ನಿತ್ಯ ಸಂಚಾರಕ್ಕೆ ಈ ನಿಲ್ದಾಣವನ್ನೇ ಆಶ್ರಯಿಸಬೇಕಾಗಿದೆ.

ಒಂದು ಕಡೆ ಪ್ರಯಾಣಿಕರು ಕೆಸರಿನಲ್ಲಿಯೇ ಬಸ್‌ಗಳನ್ನು ಹತ್ತುವುದು, ಹೆಜ್ಜೆ ಇಡಲೋ ಬೇಡವೋ ಎಂಬಂತೆ ಹೆಂಗಸರು, ಮಕ್ಕಳು ಸಾಗುವುದು ಸಾಮಾನ್ಯವಾಗಿದೆ. ಮಳೆ ಬಂದರೆ ಪ್ರಯಾಣಿಕರಿಗೆ ಕೂರಲು ಜಾಗವಿಲ್ಲ. ಇದು ಜಿಲ್ಲೆಯ ಖಾಸಗಿ ಬಸ್ ನಿಲ್ದಾಣದ ಸದ್ಯದ ಸ್ಥಿತಿ. ಆಗಿರುವ ಹುಟ್ಟನ್ನು ನೋಡಿದರೆ ಸುಮ್ಮನೆ ಒಂದು ಎಕರೆ ಪ್ರದೇಶವನ್ನು ಹಾಳು ಮಾಡುವ ಬದಲು ಅಲ್ಲಿ ಭತ್ತ, ರಾಗಿ ಬೆಳೆಯುವುದಕ್ಕಾದರು ಕೊಡಮಾಡಿದರೆ ಒಳ್ಳೆಯದೇನೋ... ಕೆಸರುಗದ್ದೆ ಓಟಕ್ಕೆ ಈ ಪ್ರದೇಶ ಹೇಳಿ ಮಾಡಿಸಿದಂತಿದೆ!

ಅದಾಗದಿದ್ದಲ್ಲಿ, ಸ್ವತಃ ಜಿಲ್ಲೆಯ ಉಸ್ತುವಾರಿಯನ್ನು ವಹಿಸಿಕೊಂಡಿರುವ ಯಡಿಯೂರಪ್ಪನವರು ಈಗಲಾದರೂ ಖಾಸಗೀ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಹೋಗಲಾಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ಪ್ರಯಾಣಿಕರ ಗೋಳನ್ನು ತಪ್ಪಿಸಲು ಮುಂದಾಗುವರೇ?

ಚಿತ್ರ: ಕೆ.ಆರ್. ಸೋಮನಾಥ್

ಜುಲೈ 4, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

 
 
 
 ಬೆಂಗಳೂರಲ್ಲಿರುವ ಸಸ್ತಾ ಹೊಟೇಲುಗಳು
 ಮಕಾವುನಲ್ಲಿರುವ ಐಷಾರಾಮಿ ಹೊಟೇಲುಗಳು
ThatsKannada
ThatsKannada
 ಸಮಾಜವೆಂಬ ಹೂವಿನ ಪಕಳೆಗಳು ಮಕ್ಕಳು
 ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸೋಣ
 ಕಾರವಾರದ ರಿವರ್ ಎಡ್ಜ್ ರೆಸಾರ್ಟಿಗೆ ಪಿಕ್ನಿಕ್
 ಕಾರ್ತೀಕ ಶುಕ್ಲ ದ್ವಾದಶಿಗೆ ಸ್ಪೆಷಲ್ ಸಾರು
 ಕನೆಕ್ಟೀಕಟ್‍ನಲ್ಲಿ ಹರಡಿದ ಕನ್ನಡದ ಕಂಪು
ThatsKannada
ThatsKannada
ThatsKannada
ThatsKannada
 ದಟ್ಸ್ ಕನ್ನಡ ಮಿತವ್ಯಯ ಜಾಹೀರಾತು ದರಗಳು
 ವೆಬ್‌ಸೈಟ್ ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಿರಿ
 ನಿಮ್ಮದೇ ಆದ ಬ್ಲಾಗ್ ರೂಪಿಸಿಕೊಳ್ಳಿ
 ನಾಗರಿಕ ಪತ್ರಕರ್ತರಿಗೆ ಮುಕ್ತ ಆಹ್ವಾನ!
 ಉಚಿತ ನ್ಯೂಸ್‌ಲೆಟರ್‌ಗೆ ಚಂದಾದಾರರಾಗಿರಿ
 ಕನ್ನಡ ಎಸ್ಎಮ್ಎಸ್: SMS START KNNEWS 5757576
ThatsKannada
ನಿಮ್ಮ ಮತ ಚಲಾಯಿಸಿ
ThatsKannada
Recommended Links
     Become fans of Namitha, Trisha, Katrina, Deepika, Hrithik Roshan      Make Like Minded Friends      SMS Updates      Astrology      Chat      RSS      Jobs      Book your Domains      Explore India