
ನಿಮಗೆಲ್ಲ ತಿಳಿದಿರುವಂತೆ, ಕರ್ನಾಟಕ ಮತ್ತು ಕನ್ನಡಕ್ಕೆ ಸಂಬಂಧಿಸಿದ ಸುದ್ದಿ ಸ್ವಾರಸ್ಯಗಳನ್ನು ನಿಮ್ಮ ಮೆಚ್ಚಿನ ಅಂತರ್ಜಾಲ ತಾಣ ಕಳೆದ 9 ವರ್ಷಗಳಿಂದ ಪ್ರಕಟಿಸುತ್ತಿದೆ. ಸಿನೆಮಾ, ರಾಜಕೀಯ, ಅಡುಗೆಮನೆ, ಸಾಹಿತ್ಯ ಮುಂತಾದ ವಿಷಯಗಳಿಗೆ ಸೇರಿದ ಲೇಖನಗಳನ್ನು ವಿಶ್ವದಾದ್ಯಂತ ಕನ್ನಡಿಗರ ಮನೆಮನೆಗೂ ತಲುಪಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹದಿನೈದಕ್ಕೂ ಹೆಚ್ಚಿನ ಸೃಜನಶೀಲ ಲೇಖಕರಿಗೆ ಅಂಕಣ ಬರೆಯಲು ಅವಕಾಶ ನೀಡಿ ತನ್ನ ಪರಿಧಿಯನ್ನು ಹೆಚ್ಚಿಸಿಕೊಂಡಿದೆ.
ಬರೆಯುವ ಮುನ್ನ ಕೆಲ ವಿಷಯಗಳು ನಿಮ್ಮ ಗಮನದಲ್ಲಿರಲಿ
ನೀವು ಬರೆಯಲಿರುವ, ಬರೆದಿರುವ ಸುದ್ದಿ, ಲೇಖನ ಸ್ವಂತಿಕೆಯಿಂದ ಕೂಡಿರಲಿ. ಯಾವುದೇ ಪತ್ರಿಕೆಯಿಂದ, ಅಂತರ್ಜಾಲ ತಾಣದಿಂದ ಅಥವಾ ರೇಡಿಯೋದಿಂದ ಪ್ರೇರಿತವಾಗಿಲ್ಲದಿರಲಿ.
ವಿಷಯಗಳು
* ವ್ಯಕ್ತಿಚಿತ್ರ
* ವಿಷಯಾಧಾರಿತ (ಆರೋಗ್ಯ, ಪರಿಸರ, ಮೂಲಸೌಕರ್ಯ ಮುಂತಾದವು)
* ಪ್ರಾದೇಶಿಕ ಕ್ರೀಡೆ
* ನಿಮ್ಮ ನಗರ ಅಥವಾ ಹಳ್ಳಿಯಲ್ಲಿ ನಡೆಯುವ ವಿದ್ಯಮಾನ
* ನಿಮ್ಮ ಊರಿನ ಸುತ್ತಮುತ್ತಲಿನ ಪ್ರಮುಖ ಸ್ಥಳಗಳು
* ಸಾಂದರ್ಭಿಕ ಲೇಖನಗಳು
* ಶೈಕ್ಷಣಿಕ ಸಂಸ್ಥೆ ಕುರಿತ ಮಾಹಿತಿ ಮತ್ತು ಕಾರ್ಯಕ್ರಮಗಳು
* ಯುವಸಂವೇದಿ ಲೇಖನಗಳು
* ಮನರಂಜನೆ (ಸಿನೆಮಾ ಅಥವಾ ನಾಟಕಗಳ ವಿಮರ್ಶೆ ಇತ್ಯಾದಿ)
* ನಿಮ್ಮ ಊರಿನ ವಿಶೇಷ ತಿಂಡಿ ತಿನಿಸುಗಳು
* ಸಂಪಾದಕರು ತಿಳಿಸಿದ ಯಾವುದೇ ವಿಷಯ
ಗಮನಿಸಿ
* ರಾಜಕೀಯ, ಅಪರಾಧ ಮತ್ತು ತನಿಖಾ ವರದಿಗಳು ವಿವಾದಗಳಿಂದ ಮುಕ್ತವಾಗಿರಲಿ.
* ಬರಹಗಳನ್ನು ವೈಯಕ್ತಿಕ ನಿಂದನೆಗಳಿಂದ ದೂರವಿಡಿ.
* ಮಾನವೀಯತೆ ಸಾರುವ ಲೇಖನಗಳಿಗೆ ಹೆಚ್ಚಿನ ಪ್ರಾಧಾನ್ಯತೆ.
* ಬರಹಗಳು ಸುತ್ತಿಬಳಸದೆ ನೇರವಾಗಿರಲಿ, ಭಾಷಾಲಂಕಾರದಿಂದ ದೂರವಿರಲಿ.
ಸ್ವೀಕರಿಸಲಾಗುವ ಬರಹದ ಸ್ವರೂಪ
* ಕಂಪ್ಯೂಟರ್ ಮುಖಾಂತರ ಕಳುಹಿಸುವ ಲೇಖನಗಳನ್ನು ಮಾತ್ರ ಸ್ವೀಕರಿಸಲಾಗುವುದು.
* ಲೇಖನವನ್ನು ಕನ್ನಡದಲ್ಲಿಯೇ ಬರೆದಿರಬೇಕು.
* ಯುನಿಕೋಡ್ ನಲ್ಲಿ ಕಳುಹಿಸಿದರೆ ಉತ್ತಮ.
* ಲೇಖನದ ಶೀರ್ಷಿಕೆ ಚಿಕ್ಕ ಮತ್ತು ಚೊಕ್ಕದಾಗಿರಬೇಕು.
* ಬರಹ 600 ಪದಗಳನ್ನು ಮೀರಿರಬಾರದು.
* ಕಳುಹಿಸುವ ಚಿತ್ರಗಳು ಕಾಪಿರೈಟ್ ನಿರ್ಬಂಧದಿಂದ ಮುಕ್ತವಾಗಿರಲಿ.
* ಲೇಖಕರೇ ತೆಗೆದ ಚಿತ್ರಗಳಿಗೆ ಹೆಚ್ಚಿನ ಮಾನ್ಯತೆ.
ಲೇಖನವನ್ನು cj.kannada@greynium.com ವಿಳಾಸಕ್ಕೆ ಟೆಕ್ಸ್ಟ್ (.txt) ಸ್ವರೂಪದಲ್ಲಿ 'Citizen Journalism' ಸಬ್ಜೆಕ್ಟ್ ಲೈನ್ ನೊಂದಿಗೆ ಕಳುಹಿಸಿಕೊಡಿ.
ನಿಬಂಧನೆ ಮತ್ತು ಷರತ್ತುಗಳು
* ಪೋರ್ಟಲ್ ಸಂಪಾದಕರ ನಿರ್ಧಾರವೇ ಅಂತಿಮ.
* ಪ್ರಕಟಿಸುವ ಮುನ್ನ ಲೇಖನವನ್ನು ಅಗತ್ಯಕ್ಕೆ ತಕ್ಕಂತೆ ತಿದ್ದುಪಡಿ ಮಾಡುವ ಸ್ವಾತಂತ್ರ್ಯ ಸಂಪಾದಕರದ್ದು.
* ಲೇಖನಕ್ಕೆ ಲೇಖಕರ ಬೈಲೈನ್ ನೀಡಲಾಗುವುದು.
ಮತ್ತೇನಾದರೂ ಸ್ಪಷ್ಟೀಕರಣ ಬಯಸಿದ್ದರೆ ಸಂಪಾದಕರಿಗೆ ಮುಕ್ತವಾಗಿ ಬರೆಯಿರಿ : cj.kannada@greynium.com
(ಮರೆತ ಮಾತು : ಇಲ್ಲಿ ಎಲ್ಲ ಲೇಖನಗಳನ್ನು ಒಂದೇ ವಿಭಾಗದಲ್ಲಿ ಪ್ರಕಟಿಸುವುದಿಲ್ಲ. ಪ್ರತಿ ಲೇಖಕರಿಗೂ ಒಂದೊಂದು ವಿಭಾಗ ಪ್ರಾರಂಭಿಸಲಾಗುವುದು. ನಿಮ್ಮ ನೆಚ್ಚಿನ ದಟ್ಸ್ ಕನ್ನಡದಲ್ಲಿ ನಿಮ್ಮದೇ ಅಂಕಣ ಪ್ರಾರಂಭಿಸಲು ಸುವರ್ಣಾವಕಾಶವನ್ನು ನೀಡಲಾಗುತ್ತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸತ್ವಯುತವಾದ ಬರಹಗಳಿಂದ ನಿಮ್ಮದೇ ಅಂಕಣವನ್ನು ಅಲಂಕರಿಸುವುದು ನಿಮ್ಮ ಜವಾಬ್ದಾರಿ.)